SHOCKING | ದ್ವಿಚಕ್ರ ವಾಹನಕ್ಕೆ ಕಬ್ಬು ತುಂಬಿದ ಟ್ರಾಕ್ಟರ್ ಡಿಕ್ಕಿ: ಹೋಂ ಗಾರ್ಡ್ ಸಾವು

ಹೊಸದಿಗಂತ ವರದಿ,ಮಂಡ್ಯ :

ದ್ವಿಚಕ್ರ ವಾಹನಕ್ಕೆ ಕಬ್ಬು ತುಂಬಿದ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಗೃಹ ರಕ್ಷಕ ದಳದ ಸಿಬ್ಬಂದಿ ಸ್ಥಳದಲ್ಲಿ ಧಾರುಣವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಮಂಡ್ಯ ಹೊಳಲು ರಸ್ತೆಯ ಹೊಸಹಳ್ಳಿ ಗೇಟ್ ಬಳಿ ನಡೆದಿದೆ.

ತಾಲೂಕಿನ ಶಿವಳ್ಳಿ ಗ್ರಾಮದ ಬಸವರಾಜು (45) ಎಂಬಾತನೇ ಮೃತಪಟ್ಟ ಹೋಂಗಾರ್ಡ್. ಈತ ಮಂಡ್ಯದಲ್ಲಿ ಕರ್ತವ್ಯ ಮುಗಿಸಿಕೊಂಡು ವಾಪಸ್ಸು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಹೊಳಲು ಕಡೆಯಿಂದ ಮಂಡ್ಯದ ಮೈಷುಗರ್‌ಗೆ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ ಡಿಕ್ಕಿ ಹೊಡೆದು ಆತನ ಮೇಲೆ ಹರಿದ ಪರಿಣಾಮ ಈ ದುರ್ಘನೆ ಜರುಗಿದೆ.

ಟ್ರಾಕ್ಟರ್‌ನ ಚಕ್ರ ಆತನ ಮೇಲೆ ಹರಿದಿದ್ದೂ ಅಲ್ಲದೆ, ಸ್ವಲ್ಪ ದೂರ ದೇಹವನ್ನು ಎಳೆದೊಯ್ದಿದೆ. ಘಟನೆಯಿಂದಾಗಿ ದೇಹ ಛಿದ್ರಗೊಂಡಿದೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!