ಶ್ರೀ ಕ್ಷೇತ್ರ ಕಟೀಲು ಪರಿಸರದಲ್ಲಿ ಕಿರು ಸೇತುವೆ ಜಲಾವೃತ: ಸಂಕಷ್ಟದಲ್ಲಿ ನಾಗರಿಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ನಾಡಿನ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಕ್ಷೇತ್ರದ ಪರಿಸರದಲ್ಲಿಯೂ ನಂದಿನಿ ನದಿ ಉಕ್ಕಿ ಹರಿದಿದ್ದು, ಜಳಕದ ಕಟ್ಟೆ ಬಳಿ ಕಿರು ಸೇತುವೆ ಜಲಾವೃತಗೊಂಡಿದೆ.

ಕಟೀಲಿಗೆ ಸಂಪರ್ಕ ಕಲ್ಪಿಸುವ ಜಲಕದ ಕಟ್ಟೆ ಬಳಿ ಬಡಗ ಎಕ್ಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಕ್ಕುಂಡೇಲು,ಮಚ್ಚಾರು ಪ್ರದೇಶದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಕಿರು ಸೇತುವೆ ಅವಲಂಬಿಸಿದ್ದು ನೆರೆ ನೀರಿನಿಂದಾಗಿ ಕಂಗಾಲಾಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಭಾರೀ ಮಳೆಗೆ ನಂದಿನಿ ನದಿಯ ನೆರೆ ನೀರು ಉಕ್ಕಿ ತೋಟಕ್ಕೆ ಹರಿದು ಕೃಷಿ ನಾಶ ಸಂಭವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!