ಹೊಸದಿಗಂತ ವರದಿ, ಸಿದ್ದಾಪುರ:
ತಾಲೂಕಿನ ಭಂಡಾರಕೇರಿ ಗ್ರಾಮದ ಶಾನಬಾಳೆಗದ್ದೆ ಲಕ್ಷ್ಮೀ ನಾರಾಯಣ ಬಂಗಾರೇಶ್ವರ ಹೆಗಡೆ ಅವರು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬೆಳೆಸಿದ್ದ 50 ಗಾಂಜಾ ಗಿಡಗಳನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಸ್ಥಳೀಯ ಠಾಣೆಯ ಪಿಐ ಕುಮಾರ ಕೆ., ಪಿಎಸ್ಐ ಮಲ್ಲಿಕಾರ್ಜುನ ಕೊರಾಣಿ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿಯೊಂದಿಗೆ 1ಕೆಜಿ 900 ಗ್ರಾಂ ಗಾಂಜಾಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.