ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಜನತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರೂ ಬಗೆಹರಿಸಲು ಬಾರದ ಪ್ರಧಾನಿ ಮೋದಿ ಯಾವ ಮುಖ ಇಟ್ಟುಕೊಂಡು ಯುವಜನೋತ್ಸವ ಉದ್ಘಾಟಿಸಲು ಬರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳುವ ಯೋಗ್ಯತೆ ಸಿದ್ದರಾಮಯ್ಯಗೆ ಇಲ್ಲ. ಮೋದಿ ಅವರನ್ನು ಇಡೀ ವಿಶ್ವವೇ ಮೆಚ್ಚಿದೆ. ಪ್ರಧಾನಿ ಮೋದಿ ಸೂರ್ಯನಂತೆ, ಸೂರ್ಯನಿಗೆ ಮುಖ ಮಾಡಿ ಉಗುಳಿದರೆ ಅದು ಅವರಿಗೇ ಬಂದು ಬೀಳುತ್ತದೆ.
ಪ್ರಧಾನಿ ಮೋದಿ ಅವರ ಬಗ್ಗೆ ಅನಶವಶ್ಯಕ ಮಾತನಾಡಿ ಹೀರೋ ಆಗುವ ಆಸೆ ಸಿದ್ದರಾಮಯ್ಯರದ್ದು ಎಂದು ಈಶ್ವರಪ್ಪ ಹೇಳಿದ್ದಾರೆ.