ಸಿದ್ಧರಾಮಯ್ಯ ಪ್ರಚಾರಕ್ಕಾಗಿ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ : ಈಶ್ವರಪ್ಪ ಆರೋಪ

ಹೊಸದಿಗಂತ ವರದಿ ಶಿವಮೊಗ್ಗ:

“ಆರ್‌ಎಸ್‌ಎಸ್ ಚಡ್ಡಿ ಬಗ್ಗೆ ಕೀಳು ಮಟ್ಟದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದರೆ ರಸ್ತೆಯಲ್ಲಿ ಹೋಗುವ ನಾಯಿಗೂ ಅವರಿಗೆ ಗೌರವ ಕೊಡಬೇಕು ಅನ್ನಿಸುವುದಿಲ್ಲ” ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ರಾಷ್ಟೀಯ ಸ್ವಯಂ ಸೇವಕ ಸಂಘದ ಚಡ್ಡಿ ಹಾಕಿಕೊಂಡು ಸಂಸ್ಕಾರ ಪಡೆದು ಬೆಳೆದವರೇ ಈಗ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಅನೇಕ ರಾಜ್ಯಗಳಲ್ಲಿ ಮುಖ್ಯಮಂತ್ರಿ, ಮಂತ್ರಿಗಳು ಆಗಿದ್ದಾರೆ. ಚಡ್ಡಿ ಸಂಸ್ಕೃತಿಯಿಂದ ದೇಶ ಸುಸಂಸ್ಕೃತವಾಗಿದೆ. ಆದರೆ ಸಿದ್ದರಾಮಯ್ಯ ಹುಚ್ಚುಚ್ಚು ಹೇಳಿಕೆಗಳಿಂದ ಹುಚ್ಚು ಪ್ರಚಾರ ಪಡೆಯಲು ಹೊರಟಿದ್ದಾನೆ. ಆತನಿಗೆ ನಿಮ್ಹಾನ್ಸ್‌ಗೆ ಸೇರಿಸಿದರೂ ಚಿಕಿತ್ಸೆ ಸಿಗುವುದಿಲ್ಲ. ಈ ದೇಶದ ಯಾವ ಆಸ್ಪತ್ರೆಯಲ್ಲೂ ಅವನ ಕಾಯಿಲೆಗೆ ಔಷಧ ಸಿಗುವುದಿಲ್ಲ” ಎಂದು ಹರಿಹಾಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!