ವರುಣಾ ಮೇಲೆ ಎಲ್ಲರ ಕಣ್ಣು, ಯಾರೇ ಬರ್ಲಿ ಗೆಲ್ಲೋದು ನಾನೇ ಎಂದ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈ ವೋಲ್ಟೇಜ್ ಕ್ಷೇತ್ರವಾಗಿರುವ ವರುಣಾದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ವಿ.ಸೋಮಣ್ಣ ಕಣಕ್ಕಿಳಿದಿದ್ದಾರೆ.

ಪ್ರಬಲ ಲಿಂಗಾಯತ ನಾಯಕರಾದ ಸೋಮಣ್ಣ, ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲಿದ್ದು, ವರುಣಾ ಕ್ಷೇತ್ರದ ಮೇಲೆ ಎಲ್ಲರ ಕಣ್ಣಿದೆ. ಈ ಮಧ್ಯೆ, ಯಾರೇ ಬರಲಿ, ಯಾರೇ ಹೋಗಲಿ ಗೆಲ್ಲೋದು ನಾವೇ ಎಂದು ಸಿದ್ರಾಮಣ್ಣ ಕೂಲ್ ಆಗಿಯೇ ಹೇಳಿದ್ದಾರೆ.

ಜನರ ಬೆಂಬಲ ನನಗಿದೆ, ಹಣಬಲದಿಂದ ಗೆಲುವು ಅಸಾಧ್ಯ, ನನ್ನ ವಿರುದ್ಧ ಯಾರು ಬೇಕಾದ್ರೂ ಸ್ಪರ್ಧೆ ಮಾಡಲಿ, ನನಗೆ ನನ್ನ ಜನರ ಮೇಲೆ ನಂಬಿಕೆ ಇದೆ ಎಂದಿದ್ದಾರೆ.

ಇತ್ತ ಸೋಮಣ್ಣ ಮಾತನಾಡಿದ್ದು, ನಮ್ಮ ಡಬಲ್ ಇಂಜಿನ್ ಸರ್ಕಾರ, ಕೇಂದ್ರ ಸರ್ಕಾರ ಮಾಡಿರುವ ಕಾರ್ಯಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರನ್ನು ತಲುಪುವ ಕೆಲಸ ಮಾಡಿದ್ದೇವೆ. ಗೆಲುವು ಸದಾ ನಮ್ಮದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!