ದಿಗಂತ ವರದಿ ವಿಜಯಪುರ:
ನಗರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರವಾಗಿದ್ದು, ಶ್ರೀಗಳು ಗಂಜಿ, ನೀರು ಸೇವನೆ ಮಾಡಿದ್ದಾರೆ ಎಂದು ಡಾ.ಎಸ್.ಬಿ. ಪಾಟೀಲ ಹೇಳಿದರು.
ಸೋಮವಾರ ಶ್ರೀಗಳ ಆರೋಗ್ಯದ ವರದಿ ಬಿಡುಗಡೆ ಮಾಡಿ ಮಾಹಿತಿ ನೀಡಿದ ಅವರು, ಶ್ರೀಗಳ ಪಲ್ಸ್, ಬಿಪಿ ಎಲ್ಲ ಚೆನ್ನಾಗಿದೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಶ್ರೀಗಳ ಆಹಾರ ಸೇವನೆ ಕಡಿಮೆ ಆಗಿದೆ. ಗಂಜಿ, ನೀರು ಸೇವನೆ ಮಾಡುತ್ತಿದ್ದಾರೆ. ಶ್ರೀಗಳು ಮೂಮೆಂಟ್ ಮಾಡುತ್ತಿದ್ದು, ಮತಾಡುತ್ತಾರೆ ಎಂದರು.