ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ್ ಕೇವಲ ಪಾಕಿಸ್ತಾನದ ಉಗ್ರರಿಗೆ ಮಾತ್ರವಲ್ಲ, ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಗಿರಾಕಿಗಳು, ಭೂಗತ ಪಾತಕಿಗಳಿಗೂ ನಿದ್ದೆಯಿಲ್ಲದಂತೆ ಮಾಡಿದೆ!
ಕಳೆದ ಹಲವು ವರ್ಷಗಳಿಂದ ಪಾಕಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ ಎನ್ನಲಾದ ದಾವೂದ್ ಇಬ್ರಾಹೀಂ, ಛೋಟಾ ಶಕೀಲ್, ಮುನ್ನಾ ಜಿಂಗಾರನ್ನು ಭಾರತದ ಸತತ ದಾಳಿಗಳ ನಡುವೆಯೂ ಪಪಾಕ್ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ದಾವೂದ್ ಇದುವರೆಗೂ ಕಾರಾಚಿಯಲ್ಲಿಯೇ ‘ಸುರಕ್ಷಿತ’ವಾಗಿ ನೆಲೆಸಿದ್ದ. ಸಧ್ಯದ ಬೆಳವಣಿಗೆಯಲ್ಲಿ ಈ ಎಲ್ಲಾ ಪಾತಕಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕೆಲವು ಮಾಹಿತಿಗಳ ಪ್ರಕಾರ ಇವರು ದೇಶವನ್ನೇ ತೊರೆದಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇದು ಭಾರತದ ದಾರಿತಪ್ಪಿಸುವ ತಂತ್ರದ ಭಾಗವೇ ಅಥವಾ ಪರಾರಿಯಾಗಿರುವುದು ನಿಜವೇ ಎಂಭ ಬಗ್ಗೆ ಭಾರತೀಯ ಭದ್ರತಾ ಸಂಸ್ಥೆಗಳು ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದಾರೆ.