ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ನವವಿವಾಹಿತ, ನೌಕಾ ಸೇನೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಅಂತ್ಯಕ್ರಿಯೆಯನ್ನು ವಿನಯ್ ತಂಗಿ ಸೃಷ್ಟಿ ನೆರವೇರಿಸಿದ್ದಾರೆ.
ಹರ್ಯಾಣದ ಕರ್ನಲ್ನಲ್ಲಿ ವಿನಯ್ ಅವರ ಅಂತ್ಯಕ್ರಿಯೆ ನೆರವೇರಿದೆ. ಅಣ್ಣನ ಚಿತೆಗೆ ತಂಗಿ ಸೃಷ್ಟಿ ಅಗ್ನಿ ಸ್ಪರ್ಶ ಮಾಡಿದ್ದಾರೆ. ಅತೀವ ದುಃಖದಿಂದ ಕಣ್ಣೀರು ಹಾಕುತ್ತಾ ವಿನಯ್ ಕುಟುಂಬಸ್ಥರು ಅಂತಿಮ ವಿಧಿ ವಿಧಾನ ಪೂರ್ಣಗೊಳಿಸಿದ್ದಾರೆ.
ಈ ವೇಳೆ ತಂಗಿ ಸೃಷ್ಟಿಯ ಆಕ್ರೋಶ ಕಟ್ಟೆಯೊಡೆದು, ನನ್ನ ಅಣ್ಣನ ಕೊಂದವ್ರನ್ನ ಸಾಯ್ಸಿ ಸರ್ ಎಂದು ಹರ್ಯಾಣ ಸಿಎಂ ನಯಾಬ್ ಸಿಂಗ್ ಸೈನಿಗೆ ಮನವಿ ಮಾಡಿದ್ದಾರೆ. ಅವರು ನನ್ನಣ್ಣನಿಗೆ ನೀನು ಮುಸ್ಲಿಮಾ ಎಂದು ಕೇಳಿದ್ರು. ಬಳಿಕ ಅಣ್ಣನ ಮೇಲೆ ಮೂರು ಗುಂಡು ಹಾರಿಸಿದ್ರು. ಒಂದೂವರೆ ಗಂಟೆ ಕಾಲ ನಮ್ಮ ರಕ್ಷಣೆಗೆ ಯಾರೂ ಬರಲಿಲ್ಲ. ಉಗ್ರರು ಸಾಯ್ಬೇಕು, ನಂಗೆ ನ್ಯಾಯ ಬೇಕು ಎಂದು ಸೃಷ್ಟಿ ಕಣ್ಣೀರಿಟ್ಟಿದ್ದಾರೆ.