ಹೊಸದಿಗಂತ ವರದಿ,ಕಾರವಾರ:
ಕಾಳಿ ನದಿಯಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 6 ಜನರು ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸಂಭವಿಸಿದೆ.
ಹುಬ್ಬಳ್ಳಿ ಮೂಲದ ನಜೀರ್ ಅಹ್ಮದ್ (40) ರೇಷಾಉನ್ನಿಸಾ(38)
ಅಲ್ಜಿಯಾ ಅಹ್ಮದ(10) ಮೋಹಿನ ಅಹ್ಮದ್ (6) ಇಫ್ರಾ ಅಹ್ಮದ್(15) ಅಬೀದ ಅಹ್ಮದ್ (12) ಮೃತ ದುರ್ದೈವಿಗಳಾಗಿದ್ದು ಭಾನುವಾರದ ರಜಾದಿನ ಕಳೆಯಲು ಕುಟುಂಬದ ಎಂಟು ಜನರನ್ನು ಒಳಗೊಂಡ ತಂಡ ದಾಂಡೇಲಿ ಪ್ರವಾಸಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ತಂಡದಲ್ಲಿದ್ದ ಇಬ್ಬರು ಮಹಿಳೆಯರನ್ನು ಹೊರತುಪಡಿಸಿ ಉಳಿದ ಆರು ಜನರು ಕಾಳಿ ನದಿಯಲ್ಲಿ ಈಜಲು ತೆರಳಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿರುವುದಾಗಿ ತಿಳಿದು ಬಂದಿದೆ.
ನಾಲ್ವರ ಮೃತ ದೇಹ ಪತ್ತೆಯಾಗಿದ್ದು, ಕಣ್ಮರೆಯಾದ ಇಬ್ಬರ ದೇಹಕ್ಕೆ ಹುಡುಕಾಟ ಮುಂದುವರಿದಿದೆ.
ಘಟನೆ ಕುರಿತಂತೆ ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ.