ಸೋಮೇಶ್ವರ ಕಡಲ ತೀರದಲ್ಲಿ ರಕ್ಕಸ ಅಲೆಗಳ ಅಬ್ಬರ: ಕೊಚ್ಚಿ ಹೋಗುತ್ತಿದೆ ದೇಗುಲ ಸಂಪರ್ಕದ ಮೆಟ್ಟಿಲುಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಚುರುಕು ಪಡೆದುಕೊಂಡಿದ್ದು, ಇದರ ಪರಿಣಾಮ ಕಡಲ್ಕೊರೆತ ತೀವ್ರಗೊಂಡಿದೆ.

ಇಲ್ಲಿನ ಉಳ್ಳಾಲ ತಾಲೂಕಿನ ಸೋಮೇಶ್ವರ,ಉಚ್ಚಿಲ ಬಟ್ಟಪ್ಪಾಡಿ ,ಮೊಗವೀರ ಪಟ್ಣ,ಮುಕ್ಕಚ್ಚೇರಿ,ಹಿಲೇರಿಯ,ಸೀ ಗ್ರೌಂಡ್ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.

ಸೋಮೇಶ್ವರದಲ್ಲಿ ತೀರಕ್ಕೆ ಅಪ್ಪಳಿಸುತ್ತಿರುವ ರಕ್ಕಸ ಅಲೆಗಳು ಸಮುದ್ರ ತೀರದಿಂದ ಇತಿಹಾಸ ಪ್ರಸಿದ್ಧ ಸೋಮನಾಥ ದೇವಸ್ಥಾನ ಸಂಪರ್ಕದ ಕಾಂಕ್ರಿಟ್ ಮೆಟ್ಟಿಲುಗಳನ್ನೇ ಕೊಚ್ಚಿಕೊಂಡು ಹೋಗುತ್ತಿದೆ.

ಸೋಮನಾಥ ದೇವಸ್ಥಾನದಿಂದ ಸಮುದ್ರ ತೀರಕ್ಕೆ ಸಂಪರ್ಕ ಕಲ್ಪಿಸುವ ಈ ಕಾಂಕ್ರಿಟ್ ಮೆಟ್ಟಿಲುಗಳನ್ನ ಪ್ರವಾಸೋದ್ಯಮ ಇಲಾಖೆಯು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ನಿರ್ಮಿಸಿದ್ದು, ಸಂಬಂಧ ಪಟ್ಟ ಇಲಾಖೆಯವರು ತಕ್ಷಣವೇ ತುರ್ತು ರಕ್ಷಣಾ ಕಾಮಗಾರಿ ನಡೆಸಿ ಉಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!