ದ್ರೌಪದಿ ಮುರ್ಮುಗೆ ‘ಪೂರ್‌ ಲೇಡಿ’ ಎಂದ ಸೋನಿಯಾ: ಘನೆತೆಗೆ ಧಕ್ಕೆ ತಂದಿದ್ದೀರಿ ಎಂದು ಖಂಡಿಸಿದ ರಾಷ್ಟ್ರಪತಿ ಭವನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಸೋನಿಯಾ ಗಾಂಧಿ ಅವರ ‘ಪೂರ್ ಥಿಂಗ್’ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಪತಿ ಭವನ ಈ ಹೇಳಿಕೆಯನ್ನು ಖಂಡಿಸಿದೆ .

‘ ಪೂರ್‌ ಲೇಡಿ..ಭಾಷಣದ ಕೊನೆಯಲ್ಲಿ ತುಂಬಾ ಸುಸ್ತಾದಂತೆ ಕಂಡರು, ಆಕೆಗೆ ಮಾತನಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಅಯ್ಯೋ ಪಾಪ..’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಆಡಿರುವ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ರಾಷ್ಟ್ರಪತಿ ಭವನ ಕೂಡ ಕಟು ಶಬ್ದಗಳಲ್ಲಿ ಟೀಕಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ‘ಪೂರ್‌ ಥಿಂಗ್‌’ ಎಂದು ಬಳಸಿರುವ ಶಬ್ದ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

ಇದನ್ನು ಹೇಳುವ ಮೂಲಕ ಖಂಡಿತವಾಗಿಯೂ ನೀವು ದೇಶದ ಅತ್ಯಂತ ಉನ್ನತ ಹುದ್ದೆಯ ಘನೆತೆಗೆ ಧಕ್ಕೆ ತಂದಿದ್ದೀರಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬಜೆಟ್‌ ಅಧಿವೇಶನದ ಆರಂಭದ ದಿನವಾದ ಇಂದು ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ದೀರ್ಘ ಭಾಷಣ ಮಾಡಿದ್ದರು. ಆ ಬಳಿಕ ಸಂಸತ್‌ ಭವನದಿಂದ ಹೊರಬಂದು ಮಾತನಾಡಿದ ಕಾಂಗ್ರೆಸ್‌ ಪಾರ್ಲಿಮೆಂಟರಿ ಚೇರ್‌ಪರ್ಸನ್‌ ಸೋನಿಯಾ ಗಾಂಧಿ, ಆಕೆ ಭಾಷಣದ ಕೊನೆಯಲ್ಲಿ ತುಂಬಾ ಸುಸ್ತಾದಂತೆ ಕಂಡಿದ್ದರು. ಆಕೆಗೆ ಮಾತನಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಅಯ್ಯೋ ಪಾಪ.. ಎಂದು ಹೇಳಿದ್ದರು.

ಸತ್ಯದಿಂದ ದೂರವಾದದ್ದೇನೂ ಇಲ್ಲ ಎಂದು ರಾಷ್ಟ್ರಪತಿ ಭವನ ಸ್ಪಷ್ಟಪಡಿಸಲು ಬಯಸುತ್ತದೆ. ರಾಷ್ಟ್ರಪತಿಗಳು ಯಾವುದೇ ಹಂತದಲ್ಲಿಯೂ ದಣಿದಿರಲಿಲ್ಲ. ವಾಸ್ತವವಾಗಿ, ಅವರು ತಮ್ಮ ಭಾಷಣದ ಸಮಯದಲ್ಲಿ ಮಾಡಿದಂತೆ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ, ಮಹಿಳೆಯರು ಮತ್ತು ರೈತರಿಗಾಗಿ ಮಾತನಾಡುವುದು ಎಂದಿಗೂ ದಣಿವುಂಟುಮಾಡುವುದಿಲ್ಲ ಎಂದು ಅವರು ನಂಬಿದ್ದಾರೆ. ಈ ನಾಯಕರು ಹಿಂದಿಯಂತಹ ಭಾರತೀಯ ಭಾಷೆಗಳಲ್ಲಿನ ಭಾಷಾವೈಶಿಷ್ಟ್ಯ ಮತ್ತು ಭಾಷಣದ ಬಗ್ಗೆ ತಮ್ಮನ್ನು ತಾವು ಪರಿಚಿತರಾಗಿಲ್ಲದ ಕಾರಣ ತಪ್ಪು ಅಭಿಪ್ರಾಯವನ್ನು ರೂಪಿಸಿಕೊಂಡಿದ್ದಾರೆ ಎಂದು ರಾಷ್ಟ್ರಪತಿ ಕಚೇರಿ ನಂಬುತ್ತದೆ. ಯಾವುದೇ ಸಂದರ್ಭದಲ್ಲಿ, ಅಂತಹ ಕಾಮೆಂಟ್‌ಗಳು ಕಳಪೆ ಅಭಿರುಚಿಯವು, ದುರದೃಷ್ಟಕರ ಮತ್ತು ಸಂಪೂರ್ಣವಾಗಿ ತಪ್ಪಿಸಬಹುದಾದಂತಾಗಿದ್ದವು ಎಂದು ಖಂಡಿಸಿದೆ.

ಇದರ ಬೆನ್ನಲ್ಲಿಯೇ ಬಿಜೆಪಿಯ ನಾಯಕರು ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್‌ಪಕ್ಷದ ಮೇಲೆ ಮುಗಿಬಿದ್ದಿದ್ದು, ಮಾಜಿ ಕಾಂಗ್ರೆಸ್‌ ಅಧ್ಯಕ್ಷೆ ತಮ್ಮ ಹೇಳಿಕೆಯ ಬಗ್ಗೆ ರಾಷ್ಟ್ರಪತಿಗಳ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!