ಕೊನೆಗೂ ಜೀವನದ ಹೊಸ ಯೋಜನೆಗಳ ರಹಸ್ಯ ಬಿಚ್ಚಿಟ್ಟ ಸೌರವ್ ಗಂಗೂಲಿ: ಏನದು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಹಸ್ಯ ಟ್ವೀಟ್ ಮಾಡುವ ಮೂಲಕ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ದಾದಾ ಸೇರ್ಪಡೆ ಆಗುತ್ತಾರೆ ಈಎಂಬ ವಂದತಿಗಳಿಗೆ ಸ್ವತಃ ಬಿಸಿಸಿಐ ಅಧ್ಯಕ್ಷ ಹಾಗೂ ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದು, ತಮ್ಮ ಜೀವನದ ಹೊಸ ಯೋಜನೆಗಳನ್ನು ಗುರುವಾರ ಬಹಿರಂಗಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಗಂಗೂಲಿ, ಯಾವುದೇ ಕನಸು ನನಸುಗೊಳ್ಳಲು ಸರಿಯಾದ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ಮಾರ್ಗದರ್ಶಕರಿಗೆ ನೆರವಾಗುವುದಾಗಿ ತಿಳಿಸಿದ್ದಾರೆ.
ಬಹಳ ಕಾಲದಿಂದ ನಾವು ನಟರು, ಆಟಗಾರರು ಹಾಗೂ ಯಶಸ್ವಿ ಸಿಇಒಗಳನ್ನು ಅವರ ಗಮನಾರ್ಹ ಸಾಧನೆಯನ್ನು ಕೊಂಡಾಡುತ್ತಲೇ ಬಂದಿದ್ದೇವೆ. ಈಗ ನೈಜ ಹೀರೊಗಳು, ಅವರ ಕೋಚ್ ಹಾಗೂ ತರಬೇತಿ ನೀಡುವವರನ್ನು ತೇಜೋಮಯಗೊಳಿಸುವ ಸಮಯ ಬಂದಿದೆ.
ವಿಶ್ವದಾದ್ಯಂತ ತರಬೇತುದಾರರು, ಮಾರ್ಗದರ್ಶಕರು ಹಾಗೂ ಅಧ್ಯಾಪಕರಿಗಾಗಿ ನಾನು ಏನನ್ನಾದರೂ ಮಾಡಲು ಬಯಸುತ್ತೇನೆ. ಅವರೆಲ್ಲರ ರಾಯಭಾರಿಯಾಗಿ ಇಂದಿನಿಂದಲೇ ನೆರವಾಗಲಿದ್ದೇನೆ. ಈ ದೂರದೃಷ್ಟಿಯ ಭಾಗವಾದ ‘ಕ್ಲಾಸ್‌ಪ್ಲಸ್’ ಆಯಪ್‌ಗೂ ಧನ್ಯವಾದ ಸಲ್ಲಿಸಿದ್ದಾರೆ.

ನನ್ನ ಹಿಂದಿನ ಪೋಸ್ಟ್ ಬಗ್ಗೆ ಬಹಳಷ್ಟು ಪ್ರಶ್ನೆಗಳು ಎದ್ದಿವೆ. ಇತ್ತೀಚಿನಿಂದ ನಾನು ನಮ್ಮ ಸಮಾಜಕ್ಕೆ ನಿಸ್ವಾರ್ಥವಾಗಿ ಸಹಾಯ ಮಾಡುತ್ತಿರುವ ಮತ್ತು ಪ್ರತಿದಿನ ಭಾರತವನ್ನು ಶ್ರೇಷ್ಠಗೊಳಿಸುತ್ತಿರುವ ಒಂದು ಗುಂಪಿನ ಜನರ ಬಗ್ಗೆ ಯೋಚಿಸುತ್ತಿದ್ದೇನೆ. ಐಪಿಎಲ್‌ ಅತ್ಯುತ್ತಮ ಆಟಗಾರರನ್ನು ನಮಗೆ ಒದಗಿಸಿದೆ. ಆದರೆ ಈ ಎಲ್ಲ ಆಟಗಾರರ ಯಶಸ್ಸಿಗಾಗಿ ಅವರ ತರಬೇತುದಾರರು ಸುರಿಸಿದ ಬೆವರು ಹಾಗೂ ಕಠಿಣ ಪ್ರಯತ್ನವು ನನಗೆ ಮತ್ತಷ್ಟು ಪ್ರೇರಣೆ ತುಂಬಿದೆ. ಇದು ಕೇವಲ ಕ್ರಿಕೆಟ್‌ಗೆ ಮಾತ್ರವಲ್ಲ, ಶೈಕ್ಷಣಿಕ, ಫುಟ್‌ಬಾಲ್, ಸಂಗೀತ ಸೇರಿದಂತೆ ಇತರ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.
ಈ ಮೂಲಕ ಶೈಕ್ಷಣಿಕ ಅಪ್ಲಿಕೇಶನ್ ತಮ್ಮ ಹೊಸ ಉದ್ಯಮವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!