ಹೊಸದಿಗಂತ ಡಿಜಿಟಲ್ ಡೆಸ್ಕ್ :
ನಟ ವಿಜಯ್ ರಾಘವೇಂದ್ರ ಪತ್ನಿ ಸಂಜನಾ ಅಗಲಿಕೆ ನಂತರ ಇದೇ ಮೊದಲ ಬಾರಿಗೆ ಸ್ಪಂದನಾ ಬಗ್ಗೆ ವಿಜಯ್ ಮಾತನಾಡಿದ್ದಾರೆ.
ಕದ್ದಚಿತ್ರ ಸಿನಿಮಾ ಪ್ರಮೋಷನ್ ನಲ್ಲಿ ವಿಜಯ್ ಭಾರವಾದ ಮನಸ್ಸಿನಿಂದಲೇ ಭಾಗಿಯಾಗಿದ್ದಾರೆ. ವಿಜಯ್ ಸಿನಿಮಾ ಇದೇ ತಿಂಗಳೇ ರಿಲೀಸ್ ಆಗಬೇಕಿತ್ತು . ಆದರೆ ಸ್ಪಂದನಾ ಅಗಲಿಕೆಯಿಂದಾಗಿ ರಿಲೀಸ್ ಪೋಸ್ಟ್ ಪೋನ್ ಮಾಡಲಾಗಿತ್ತು.
ಸ್ಪಂದನಾಗೆ ಯಾವುದೇ ಪರಿಸ್ಥಿತಿಯಲ್ಲಿಯೂ ನಾನು ಅಳೋದು ಇಷ್ಟ ಇಲ್ಲ.ಆದರೆ ವಿಧಿ ನೋಡಿ ನನ್ನ ಜೀವನವೇ ಕಣ್ಣೀರಾಗಿದೆ. ಈಗಲೂ ಅವಳಿಲ್ಲ ಅನ್ನೋದನ್ನು ನಾನು ನಂಬಿಲ್ಲ ಎಂದಿದ್ದಾರೆ.
ಕದ್ದ ಚಿತ್ರ ಸಿನಿಮಾ ನೋಡಲೇಬೇಕು ,ಇಂಥಾ ಸ್ಕ್ರಿಪ್ಟ್ ನಾನೆಲ್ಲೂ ನೋಡಿಲ್ಲ.ಇದು ಅದ್ಭುತ ಸಿನಿಮಾ ಎಂದಿದ್ದಾರೆ.