ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮೃತಿ ದಿನಾಚರಣೆ ಅಂಗವಾಗಿ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮಿಳುನಾಡು ಸರ್ಕಾರ ಮಹಾತ್ಮ ಗಾಂಧಿ ಸ್ಮರಣಾರ್ಥ (ಜ.30) ರಂದು ಸಿಟಿ ಮ್ಯೂಸಿಯಂ ನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇದಕ್ಕೆ ರಾಜ್ಯಪಾಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿ ತಮಿಳುನಾಡು ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಕಿತ್ತಾಟಕ್ಕೆ ಕಾರಣವಾಗಿರುವುದು ಮಹಾತ್ಮ ಗಾಂಧಿ ಸ್ಮೃತಿ ದಿನಾಚರಣೆ ಅಂಗವಾಗಿ ನಡೆದಿರುವ ಕಾರ್ಯಕ್ರಮ.
‘X’ ನಲ್ಲಿನ ಪೋಸ್ಟ್ನಲ್ಲಿ ಬರೆದಿರುವ ರಾಜ್ಯಪಾಲ ರವಿ ಗಾಂಧಿ ಮಂಟಪ 1956 ರಲ್ಲಿ ಕೆ. ಕಾಮರಾಜ್ ಅವರು ಚೆನ್ನೈನ ಗಿಂಡಿ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿರುವ ವಿಶಾಲವಾದ ಭೂಮಿಯಲ್ಲಿ ನಿರ್ಮಿಸಿರುವ ರಾಷ್ಟ್ರಪಿತನ ಭವ್ಯ ಸ್ಮಾರಕವಾಗಿದೆ. ನಗರದ ವಸ್ತುಸಂಗ್ರಹಾಲಯದ ಒಂದು ಮೂಲೆಯಲ್ಲಿ ಗಾಂಧಿ ಸ್ಮಾರಕ ಕಾರ್ಯಕ್ರಮಗಳನ್ನು, ಅವರ ಜನ್ಮದಿನ ಮತ್ತು ಹುತಾತ್ಮ ದಿನವನ್ನು ನಡೆಸುವುದರಲ್ಲಿ ಏನಾದರೂ ಅರ್ಥವಿದೆಯೇ? ರಾಷ್ಟ್ರಪಿತನಿಗೆ ಸರಿಯಾದ ಗೌರವ ಸಲ್ಲಿಸಲು ಮತ್ತು ಗಾಂಧಿ ಮಂಟಪದಲ್ಲಿ ಅಂತಹ ಕಾರ್ಯಕ್ರಮಗಳನ್ನು ಸೂಕ್ತ ರೀತಿಯಲ್ಲಿ ನಡೆಸುವಂತೆ ಮುಖ್ಯಮಂತ್ರಿಗಳಿಗೆ ನಾನು ಪದೇ ಪದೇ ಮಾಡಿದ ವಿನಂತಿಗಳನ್ನು ಮಾಡಿದರೂ ಸಹ, ಮುಖ್ಯಮಂತ್ರಿಗಳು ಮೊಂಡುತನದಿಂದ ವಿನಂತಿ ನಿರಾಕರಣೆ ಮಾಡಿದ್ದಾರೆ. ಗಾಂಧಿ ಅವರು ಬದುಕಿದ್ದಾಗಲೂ ಅವರನ್ನು ದ್ರಾವಿಡ ಸಿದ್ಧಾಂತದ ಅನುಯಾಯಿಗಳು ತೀವ್ರವಾಗಿ ವಿರೋಧಿಸಿದ್ದರು ಮತ್ತು ಗಾಂಧಿ ಅವರನ್ನು ಅಪಹಾಸ್ಯ ಮಾಡುವುದನ್ನು ಮುಂದುವರಿಸಬೇಕೇ? ಎಂದು ಪ್ರಶ್ನಿಸಿದ್ದಾರೆ.
ಗಾಂಧಿ ಮಂಟಪ ಗಿಂಡಿಯ ರಾಜಭವನದ ಬಳಿಯ ಸರ್ದಾರ್ ಪಟೇಲ್ ರಸ್ತೆಯಲ್ಲಿದೆ ಮತ್ತು ಇದು ಅಣ್ಣಾ ವಿಶ್ವವಿದ್ಯಾಲಯ ಮತ್ತು ಐಐಟಿ-ಮದ್ರಾಸ್ ಕ್ಯಾಂಪಸ್ಗಳಿಗೆ ಹತ್ತಿರದಲ್ಲಿದೆ. ಸರ್ಕಾರಿ ವಸ್ತುಸಂಗ್ರಹಾಲಯ ನಗರದ ಇನ್ನೊಂದು ಬದಿಯಲ್ಲಿರುವ ಎಗ್ಮೋರ್ನಲ್ಲಿದೆ ಮತ್ತು ಇದು ಫೋರ್ಟ್ ಸೇಂಟ್ ಜಾರ್ಜ್ನಿಂದ ಸುಮಾರು 5 ಕಿ.ಮೀ ದೂರದಲ್ಲಿದ್ದು ಸಚಿವಾಲಯವನ್ನು ಹೊಂದಿದೆ.