ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೇಸ್ ನಲ್ಲಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಲ್ಲಿಂದ ಶುರುವಾದ ಪ್ರಕರಣ ಪಟ್ಟಣಗೆರೆ ಶೆಡ್ಗೆ ತಲುಪಿ ಕೊಲೆಯಲ್ಲಿ ಅಂತ್ಯವಾಗಿದೆ.
ಇತ್ತ ಪವಿತ್ರಾಗೌಡ ರೀತಿ ಮತ್ತೊಬ್ಬ ನಟಿಗೆ ಮೆಸೇಜ್ ಕಾಟ ಶುರುವಾಗಿದೆ. ಮಲೆಯಾಳಂ ನಟಿ ಹನಿರೋಸ್ಗೆ ಕಿರಾತಕರು ಕೆಟ್ಟ ಕೆಟ್ಟದಾಗಿ ಕಮೆಂಟ್ಸ್ ಮಾಡಿ ಕಿರುಕುಳ ನೀಡ್ತಿದ್ದಾರಂತೆ.
ಆದ್ರೆ ಕಮೆಂಟ್ಸ್ ಮಾಡಿದವರ ವಿರುದ್ಧ ಸಮರ ಸಾರಿದ ನಟಿ ಹನಿ ರೋಸ್ ಪವಿತ್ರಾ ಗೌಡ ರೀತಿ ಕಾನೂನನ್ನು ಕೈಗೆತ್ತಿಕೊಳ್ಳದೇ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ನಟಿ ಬರೊಬ್ಬರಿ 30 ಮಂದಿ ಕಮೆಂಟ್ಸ್ ಕಿರಾತಕರ ವಿರುದ್ಧ ನೀಡಿದ್ದಾರೆ.
ಸದ್ಯ 30 ಮಂದಿಯ ವಿರುದ್ಧ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ನಟಿ ಹನಿರೋಸ್ ದೂರು ದಾಖಲಿಸಿದ್ದಾರೆ. ಹನಿರೋಸ್ ದೂರ ಆಧರಿಸಿ ಸದ್ಯ ಕೊಚ್ಚಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಅಶ್ಲೀಲವಾಗಿ ಕಮೆಂಟ್ ಮಾಡಿದ ಅಕೌಂಟ್ಗಳ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು. ಒಟ್ಟು ಮೂವತ್ತು ಅಕೌಂಟ್ಗಳ ಜನ್ಮ ಜಾಲಾಡಿದ್ದಾರೆ. ಸದ್ಯಲ್ಲಿಯೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೊಚ್ಚಿ ಪೊಲೀಸರು ಸಜ್ಜಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಡಿರುವ ನಟಿ ಹನಿರೋಸ್, ಆರೋಪಿಗಳ ಮಾಹಿತಿ ಕಲೆ ಹಾಕಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಹನಿರೋಸ್ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.