ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕರ್ನಾಟಕ ಕಾಂಗ್ರೆಸ್ ನಿಂದ ನೂರಾರು ಕೋಟಿ ಕಪ್ಪು ಹಣ ನೀಡಲಾಗಿದೆ ಎಂದು ಮೈಸೂರಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ಗೆ ಕರ್ನಾಟಕ ಎಟಿಎಂ ಇದ್ದಂತೆ ಆಗಿದೆ. ರಾಜ್ಯ ಕಾಂಗ್ರೆಸ್ ನಿಂದ ದೇಶದಾದ್ಯಂತ ಇರುವ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಸಲುವಾಗಿ ನೂರಾರು ಕೋಟಿ ಕಪ್ಪು ಹಣ ನೀಡಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷ ರಾಜ್ಯವನ್ನು ಲೂಟಿ ಮಾಡ್ತಾ ಇದೆ. ಖಜಾನೆ ಖಾಲಿ ಆಗ್ತಾ ಇದೆ. ರೈತರಿಗೆ ವಿದ್ಯುತ್ ಇಲ್ಲ. ಕಿಸಾನ್ ಸಮ್ಮಾನ್ ನಡಿ 4 ಸಾವಿರ ಬಂದ್ ಮಾಡಿದ್ದಾರೆ. ಬೆಂಗಳೂರು ಐಟಿ ಹಬ್ ಆದ್ರೆ ನೀರಿನ ಘೋನಗೋರ ಅಭಾವ ಅನುಭವಿಸುತ್ತಿದೆ. ಚುನಾವಣೆಗಾಗಿ ಇತರೆಡೆಗೆ ಬ್ಲಾಕ್ ಮನಿ ಹಂಚಿಕೆಯಾಗಿದೆ. ನೂರಾರು ಕೋಟಿ ರಾಜ್ಯದಿಂದ ಹೋಗಿದೆ ಎಂದು ಆರೋಪಿಸಿದರು.