ಬೀದಿ ನಾಯಿ ಕಾಟ ತಡೆಯೋಕಾಗ್ತಿಲ್ಲ, ವಿಷ ಹಾಕಿ 18 ಶ್ವಾನಗಳ ಕೊಂದ ಜನರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೀದಿ ನಾಯಿಗಳ ಕಾಟ ತಡೆಯೋಕೆ ಆಗ್ತಿಲ್ಲ ಎಂದು 18 ನಾಯಿಗಳಿಗೆ ವಿಷಾಹಾರ ನೀಡಿ ಕೊಂದಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಹೊಸಕೆರೆಹಳ್ಳಿ ವಾರ್ಡ್ ಬೌಂಡ್ರಿ ಬಳಿ ಘಟನೆ ನಡೆದಿದ್ದು, ಈಗಾಗಲೇ ಏಳು ಶ್ವಾನಗಳ ಮೃತದೇಹ ಪತ್ತೆಯಾಗಿದೆ. ಜನರು ವಿಷ ಹಾಕಿ ನಾಯಿಗಳನ್ನು ಚೀಲದಲ್ಲಿ ತುಂಬಿ ಎಸೆದಿದ್ದಾರೆ.

ಅನಿಮಲ್ ಆಕ್ಟಿವಿಸ್ಟ್ ತಂಡ ನಾಯಿಗಳ ಮೃತದೇಹ ಪತ್ತೆ ಕಾರ್ಯ ಆರಂಭಿಸಿದೆ. ಏಳು ನಾಯಿಗಳ ಮೃತದೇಹ ಪತ್ತೆಯಾಗಿದ್ದು, ಎಲ್ಲವೂ ಕೊಳೆತ ಸ್ಥಿತಿಯಲ್ಲಿ ಇದ್ದವು ಎನ್ನಲಾಗಿದೆ. ಹಗ್ಗಗಳಲ್ಲಿ ಕಟ್ಟಿ ಚೀಲದಲ್ಲಿ ತುಂಬಿ ಎಸೆಯಲಾಗಿದ್ದು, ಆರ್‌ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!