ಹೊಸದಿಗಂತ ವರದಿ,ಮೈಸೂರು:
ದ್ವಿತೀಯ ಪಿಯುಸಿ ಬರೆಯಬೇಕಾಗಿದ್ದ ವಿದ್ಯಾರ್ಥಿನಿಯೋರ್ವಳು ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ನಡೆದಿದೆ.
ವ ಹೆಚ್.ಡಿ.ಕೋಟೆ ಪಟ್ಟಣದ ಹನುಮಂತನಗರದ ನಿವಾಸಿ ರಾಮ ಎಂಬವರ ಮಗಳು ಅನು(18) ಮೃತ ವಿದ್ಯಾರ್ಥಿನಿ. ಈಕೆ ಹೆಚ್.ಡಿ.ಕೋಟೆ ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕಲಿಕೆಯಲ್ಲೂ ಮುಂದಿದ್ದಳು. ಎಂದಿನoತೆ ಅವಳ ತಂದೆ ಪರೀಕ್ಷೆ ಇದೆ ಓದಿಕೋ ಎಂದಿದ್ದು, ಓದಿಕೊಳ್ಳಲು ತನ್ನ ಕೋಣೆಗೆ ತೆರಳಿದ ಅನು ನೇಣು ಬಿಗಿದುಕೊಂಡಿದ್ದಳು. ಇದನ್ನು ನೋಡಿದ ಪೋಷಕರು ಆಕೆಯನ್ನು ರಕ್ಷಿಸಲು ಯತ್ನಿಸಿದರಾದರೂ, ಆಕೆ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಳು. ಈ ಬಗ್ಗೆ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.