ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಅನೇಕರ ಸೆಲೆಬ್ರಿಟಿಗಳು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುತ್ತಿದ್ದಾರೆ.
ರಾಘವೇಂದ್ರ ರಾಜ್ಕುಮಾರ್ ಬೆಂಗಳೂರಿನಲ್ಲಿ ಮತದಾನ ಮಾಡಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಬಿಸಿಲು ಇದೆ, ಕ್ಯೂ ಇರುತ್ತದೆ, ನಾನು ವೋಟ್ ಮಾಡಿಲ್ಲ ಅಂದ್ರೆ ಏನೂ ಆಗೋದಿಲ್ಲ ಅನ್ನೋ ಮನೋಭಾವನೆ ಬಿಟ್ಟುಬಿಡಿ, ನನ್ನ ಕರ್ತವ್ಯ ನಾನು ಮಾಡಿದ್ದೇನೆ, ಹಾಗೇ ನಿಮ್ಮ ಕರ್ತವ್ಯ ನೀವು ಮಾಡಿ ಎಂದು ಸಲಹೆ ನೀಡಿದ್ದಾರೆ.
ಬೂತ್ಗಳ ಸಂಖ್ಯೆ ಹೆಚ್ಚಾಗಿದೆ, ಹಾಗಾಗಿ ಕ್ಯೂ ಭಯ ಬೇಡ, ನಿಮ್ಮ ಭವಿಷ್ಯಕ್ಕಾಗಿ ಬಂದು ವೋಟ್ ಮಾಡಿ ಎಂದಿದ್ದಾರೆ.