ಹೊಸದಿಗಂತ ವರದಿ,ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರದ ಆವಲಗುರ್ಕಿಯ ಆದಿಯೋಗಿ ಸನ್ನಿದಿಗೆ ಚಿತ್ರನಟ ರಜನೀಕಾಂತ್ ಅವರು ಶುಕ್ರವಾರ ಬೇಟಿ ನೀಡಿದ್ದಾರೆ.
ಸೂಪರ್ ಸ್ಟಾರ್ ರಜನೀಕಾಂತ್ ಅವರು ತನ್ನ ತಮ್ಮ ಸತ್ಯನಾರಾಯಣ ಅವರೊಂದಿಗೆ ಇಶಾ ಫೌಂಡೇಶನ್ ಗೆ ಭೇಟಿ ನೀಡಿ ಆದಿಯೋಗಿ ದರುಶನ ಪಡೆದಿದ್ದಾರೆ.
ಇದೊಂದು ಆಕಸ್ಮಿಕ ಭೇಟಿ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದ್ದು, ಇಶಾ ಫೌಂಡೇಶನ್ ಇದಕ್ಕೆ ಸಂಬಂಧಿಸಿದ ರಜನೀಕಾಂತ್ ಅವರು ತನ್ನ ತಮ್ಮನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಪೋಟೋಸ್ ಅಷ್ಟೇ ಹಂಚಿಕೊಂಡಿದ್ದು, ಬೇರೆ ಯಾವುದೇ ಅಧಿಕೃತ ಮಾಹಿತಿ ನೀಡಿರುವುದಿಲ್ಲ.