Sunday, December 10, 2023

Latest Posts

ಬೆಂಗಳೂರು ಬಂದ್ ಯಶಸ್ವಿಗೆ ಬೆಂಬಲಿಸಿ: ಜನರಿಗೆ ಯಡಿಯೂರಪ್ಪ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾವೇರಿ ನೀರು ವಿಚಾರ ನಾಳೆ ಬೆಂಗಳೂರು ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದು, ಬಿಜೆಪಿ ಕೂಡ ಬೆಂಬಲ ಸೂಚಿಸಿವೆ. ಇದರ ಮಧ್ಯ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಳೆ ಬೆಂಗಳೂರು ಬಂದ್ ಯಶಸ್ವಿಗೆ ಕರೆ ನೀಡಿದ್ದಾರೆ.

ನಾಳೆ ಬೆಂಗಳೂರು ಬಂದ್ ಹಿನ್ನೆಲೆ ಎಲ್ಲಾ ಅಂಗಡಿ ಹೋಟೆಲ್ ಮುಚ್ಚಿ ಬಂದ್ ಗೆ ಬೆಂಬಲ ಕೊಡಬೇಕು. ಯಾರು ಕೂಡ ಅಂಗಡಿ ಹೋಟೆಲ್ ಗಳನ್ನು ತೆರೆಯಬಾರದು ಎಂದು ಯಡಿಯೂರಪ್ಪ ಸಾರ್ವಜನಿಕರಿಗೆ ಮನವಿ ಮಾಡಿದರು.

ಒಂದು ವೇಳೆ ಯಾರಾದರೂ ನಾಳೆ ಅಂಗಡಿಗಳನ್ನು ಹೋಟೆಲ್ಗಳನ್ನು ತೆರೆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ನೀವೇ ಹೊಣೆ ಆಗುತ್ತೀರಿ. ಅದಕ್ಕೆ ಯಾರು ಮಾತನ್ನು ಕೇಳದೆ ಬಂದ್ ಗೆ ಸಂಪೂರ್ಣ ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!