ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ಪತ್ನಿಯ ಮೇಲಿನ ಅನುಮಾನದಿಂದಾಗಿ ಪತಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಪತ್ನಿಕೊಂದಿರುವುದಾಗಿ ತಿಳಿಸಲು ಠಾಣೆಗೆ ತೆರಳುವ ವೇಳೆ ಅಪಘಾತದಲ್ಲಿ ಪತಿಯೂ ಮೃತಪಟ್ಟಿದ್ದಾನೆ.
ಆದಿಲಾಬಾದ್ನಲ್ಲಿ ದೀಪಾ ಹಾಗೂ ಅರುಣ್ ವಾಸವಾಗಿದ್ದರು. ಮದುವೆಯಾಗಿ ಒಂದೇ ವಾರಕ್ಕೆ ಅರುಣ್ ದೀಪಾ ಮೇಲೆ ನೂರಾರು ಅನುಮಾನ ವ್ಯಕ್ತಪಡಿಸಿದ್ದ. ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ದೀಪಾ ಹೇಳಿದ್ದು, ತವರು ಮನೆಗೆ ಆಕೆ ಬಂದಿದ್ದಳು.
ಅರುಣ್ ಅಲ್ಲಿಗೇ ಬಂದು ಕ್ಷಮೆ ಕೇಳಿ, ಇನ್ನೆಂದೂ ಅನುಮಾನ ಪಡುವುದಿಲ್ಲ ಎಂದು ದೀಪಾಳನ್ನು ಮನೆಗೆ ಕರೆದುಕೊಂಡು ಹೋಗಿದ್ದ. ಮರುದಿನವೇ ಇಬ್ಬರೂ ಜಗಳವಾಡಿದ್ದು, ಸಿಟ್ಟಿನಲ್ಲಿ ದೀಪಾ ಕತ್ತು ಕುಯ್ದು ಮಂಚಕ್ಕೆ ಆಕೆಯ ತಲೆಯನ್ನು ಜಜ್ಜಿ ಕೊಂದಿದ್ದಾನೆ. ನಂತರ ಪೊಲೀಸ್ ಠಾಣೆಗೆ ಅರುಣ್ ತೆರಳಿದ್ದಾನೆ.
ತೆರಳುವ ಮಾರ್ಗಮಧ್ಯೆ ತನ್ನ ತಂದೆಯ ಫೋನ್ ಬಂದಿದೆ. ಹೆಂಡತಿಯನ್ನು ಕೊಂದು ಸರಂಡರ್ ಆಗಲು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ತಂದೆ ಅರುಣ್ ಮನವೊಲಿಸಿ ಮನೆಗೆ ಬರುವಂತೆ ಹೇಳಿದ್ದಾರೆ. ಒತ್ತಡದಲ್ಲಿ ಗಾಡಿ ಓಡಿಸುತ್ತಿದ್ದ ಅರುಣ್ ಲಾರಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅದಿಲಾಬಾದ್ ಎರಡನೇ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.