ಹೊಸದಿಗಂತ ವರದಿ,ಗದಗ:
ಮೊಹರಂ ಹಬ್ಬದ ಅಂಗವಾಗಿ ಅಲಿ ದೇವರು ಹೊರುತ್ತಿದ್ದ ವ್ಯಕ್ತಿ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹರ್ಲಾಪೂರ ಗ್ರಾಮದಲ್ಲಿ ನಡೆದಿದೆ .
ಮೊಹರಂ ಹಬ್ಬದಂಗವಾಗಿ ಹರ್ಲಾಪೂರ ಗ್ರಾಮವು ಸಂಭ್ರಮಾಚರಣೆಯಲ್ಲಿ ಅಲಿ ದೇವರು ಹೊತ್ತುಕೊಂಡು ಸಾಗುತ್ತಿದ್ದ ಶರೀಫ್ ಮೂಲಿಮನಿ (40) ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಸೂತಕದ ಮನೆ ಮಾಡಿದೆ.