Monday, October 2, 2023

Latest Posts

ಪೌರಕಾರ್ಮಿಕರೊಂದಿಗೆ ಸಮರ್ಥ ಭಾರತ ತಂಡದಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಜಯನಗರದ 5ನೇ ಬ್ಲಾಕ್‌ನ ಪು.ತಿ.ನ. ಉದ್ಯಾನವನದಲ್ಲಿ ಪ್ರತಿನಿತ್ಯವೂ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ವಚ್ಛಗೊಳಿಸಿ, ಅವರ ಮಾತುಗಳನ್ನು ಹೊಂದಿರುವ ಹತ್ತಾರು ಕಲ್ಲಿನ ಫಲಕಗಳನ್ನು ದಿನನಿತ್ಯ ಸ್ವಚ್ಛವಾಗಿರಿಸುವ ಪೌರಕಾರ್ಮಿಕೆಯರೊಂದಿಗೆ ‘ಬಿ ಗುಡ್ ಡು ಗುಡ್ ಅಭಿಯಾನ’ದ ಅಂಗವಾಗಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಸಮರ್ಥ ಭಾರತ ವತಿಯಿಂದ ಆಚರಿಸಲಾಯಿತು.
ಈ ವೇಳೆ ಸಮರ್ಥ ಭಾರತ ಸಂಸ್ಥೆಯ ಪ್ರಮುಖ ಮಾರ್ಗದರ್ಶಕ ಎನ್. ತಿಪ್ಪೇಸ್ವಾಮಿ, ಪ್ರಖ್ಯಾತ ವೈದ್ಯೆ ಡಾ. ಇಂದುಮತಿ ಕೃಷ್ಣಮೂರ್ತಿ, ಸಾಮಾಜಿಕ ಕಾರ್ಯಕರ್ತ ಸೋಮಶೇಖರ್, ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!