ಹೊಸದಿಗಂತ ವರದಿ, ತುಮಕೂರು
ಡಿಸೇಲ್ ತುಂಬಿದ ಲಾರಿ ದ್ವಿಚಕ್ರ ಸವಾರರಿಗೆ ಗುದ್ದಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ ದ್ವಿಚಕ್ರ ವಾಹನ ಚಾಲಕನಿಗೂ ತೀವ್ರ ಪಟ್ಟಾಗಿರುವ ಘಟನೆಗಳನ್ನು ತಾಲ್ಲೂಕಿನಲ್ಲಿ ನಡೆದಿದೆ.
ತಿಪಟೂರು ತಾಲ್ಲೂಕಿನ ಹರಿಸಮುದ್ರ ಗೇಟ್ ಬಳಿಯಲ್ಲಿ ಮಂಗಳವಾರ ಮಧ್ಯಾಹ್ನ ಗೃಹಲಕ್ಷ್ಮೀ ಯೋಜನೆಗೆ ಅಪ್ಡೇಟ್ ಮಾಡಿಸಿ ಹಿಂದಿರುಗುವಾಗ ತಿಪಟೂರು ಕಡೆಯಿಂದ ವೇಗವಾಗಿ ಬಂದಂತಹ ಡಿಸೇಲ್ ತುಂಬಿದ ಲಾರಿಯೂ ದ್ವಿಚಕ್ರ ವಾಹನ ಸವಾರರಿಗೆ ಗುದ್ದಿದ ಪರಿಣಾಮ ಸವಾರರು ತೀವ್ರ ಗಾಯಗಳಿಗೆ ಒಳಗಾಗಿದ್ದು ಡಿಸೇಲ್ ತುಂಬಿದ ಲಾರಿ ಉರುಳಿ ಬಿದ್ದಿದ್ದು ಚಾಲಕ ಪ್ರಾಣಾಪಯಾದಿಂದ ಪಾರಾಗಿದ್ದಾನೆ. ಆದರೆ ದ್ವಿಚಕ್ರ ವಾಹನದ ಸಾವರರಿಗೆ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು ಹಿಂಬದಿಯಲ್ಲಿದ್ದ ಭೈರನಾಯಕನಹಳ್ಳಿ ಗ್ರಾಮದ ಸರ್ವಮಂಗಳ(47) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನ ಚಾಲಕ ಭೈರನಾಯಕನಹಳ್ಳಿ ಗ್ರಾಮದ ಅನಿಲ್ಗೆ ತೀವ್ರ ಗಾಯಗಳಾಗಿವೆ.
ಉರುಳಿದ ಟ್ಯಾಂಕರ್ನಿಂದ ಡಿಸೇಲ್ ಸುರಿಯುತ್ತಿದ್ದು ಕೆಲ ಸ್ಥಳೀಯರು ಡಿಸೇಲ್ ತೆಗೆದುಕೊಳ್ಳಲು ಪ್ರಾಣದ ಹಂಗನ್ನು ತೊರೆದು ಬಕೇಟ್, ಬಿದಗೆಗೆ ಹಿಡಿದುಕೊಂಡರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳೀಯರನ್ನು ದೂರ ಕಳುಹಿಸಿ ನಿಗಾವಹಿಸಿದರು.
ಪ್ರಕರಣ ಹೊನ್ನವಳ್ಳಿ ಠಾಣೆಯಲ್ಲಿ ದಾಖಲಾಗಿದೆ.