ಕೊರಗಜ್ಜನ ಆದಿ ಸ್ಥಳಕ್ಕೆ ತರುಣ್ ಸುಧೀರ್-ಸೋನಾಲ್ ದಂಪತಿ ಭೇಟಿ

ಹೊಸದಿಗಂತ ವರದಿ, ಮಂಗಳೂರು:

ಕರಾವಳಿಯ ಕಾರಣೀಕ ಶಕ್ತಿಯಾದ ಉಳ್ಳಾಲದ ಕುತ್ತಾರಿನ ಕೊರಗಜ್ಜನ ಆದಿ ಸ್ಥಳಕ್ಕೆ ಇತ್ತೀಚೆಗೆ ಹಸೆಮಣೆ ಏರಿದ ಕಾಟೇರ ಸಿನೆಮಾ ನಿರ್ದೇಶಕ ತರುಣ್ ಸುಧೀರ್ ,ನಟಿ ಸೋನಾಲ್ ಮೊಂತೇರೊ ದಂಪತಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಮಂಗಳೂರಿಗೆ ಭೇಟಿ ನೀಡಿದ್ದ ಅವರು, ಗುರುವಾರ ಸಂಜೆ ಕುತ್ತಾರಿಗೆ ಬಂದು ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದರು. ಪಂಜಂದಾಯ,ಬಂಟ ,ವೈದ್ಯನಾಥ ಕೊರಗಜ್ಜ ಆದಿ ಸ್ಥಳದ ಟ್ರಸ್ಟ್ ನ ಮುಖ್ಯಸ್ಥರು ನವ ದಂಪತಿಗಳನ್ನ ಗೌರವಿಸಿ ಅಭಿನಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!