Followup | ಮೇಲುಕೋಟೆಯಲ್ಲಿ ಟೀಚರ್ ಮರ್ಡರ್: ಆರೋಪಿ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಲುಕೋಟೆಯ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿ ದೀಪಿಕಾರನ್ನು ಕೊಲೆ ಮಾಡಿ ಹೂತು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

22 ವರ್ಷದ ನಿತೀಶ್ ಬಂಧಿತ. ದೀಪಿಕಾ ಪೋಷಕರು ನಿತೀಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಅಂತೆಯೇ ಮೃತದೇಹ ಸಿಕ್ಕಾಗಿನಿಂದ ನಿತೀಶ್ ಕೂಡ ನಾಪತ್ತೆಯಾಗಿದ್ದ. ಪೊಲೀಸರು ನಿತೀಶ್ ವಿಚಾರಣೆ ನಡೆಸಿದ್ದು, ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಕಾರಣ ಬಹಿರಂಗಪಡಿಸಿಲ್ಲ.

ಮಗಳು ಕಾಣೆಯಾಗಿದ್ದಾಳೆ ಎಂದು ಪೋಷಕರು ದೂರಿದ್ದರು, ನಂತರ ಬೆಟ್ಟದ ತಪ್ಪಲಿನ ಬಳಿ ದೀಪಿಕಾ ಸ್ಟೂಟಿ ಪತ್ತೆಯಾಗಿತ್ತು. ಅಲ್ಲಿಯೇ ಆಕೆಯನ್ನು ಹೂತಿದ್ದ ನಿತೀಶ್. ದೀಪಿಕಾ ಹಾಗೂ ನಿತೀಶ್ ನಡುವೆ ಜಗಳ ನಡೆದಿದ್ದನ್ನು ಟೂರಿಸ್ಟ್ಸ್ ವಿಡಿಯೋ ಮಾಡಿದ್ದರು. ಕಡೆಯ ಬಾರಿಗೆ ದೀಪಿಕಾ ಫೋನ್‌ಗೆ ನಿತೀಶ್ ಕರೆ ಬಂದಿತ್ತು. ವಿಚಾರಣೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!