ಬೆಂಗಳೂರು ಪ್ರವಾಹಕ್ಕೆ ಟೀಕೆ ಪರಿಹಾರವಲ್ಲ ಎಂದ ತೆಲಂಗಾಣ ಸಚಿವ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಈ ವರ್ಷದ ಹಠಾತ್ ಭಾರಿ ಮಳೆ ಮತ್ತು ಅದರಿಂದ ಉಂಟಾಗುತ್ತಿರುವ ಪ್ರವಾಹ ಅವಾಂತರಗಳ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿನ ಪರಿಸ್ಥಿತಿ ಈಗ ಚರ್ಚೆಗೆ ಈಡಾಗಿರುವಂತೆಯೇ, ತೆಲಂಗಾಣದ ಸಚಿವ ಕೆ.ಟಿ .ರಾಮರಾವ್ ಅವರು ಬೆಂಗಳೂರಿನ ಬೆಂಬಲಕ್ಕೆ ನಿಂತಿದ್ದು,ಟೀಕೆ ಇದಕ್ಕೆ ಪರಿಹಾರವಲ್ಲ. ತಾಪಮಾನ ವ್ಯತ್ಯಯದ ವಿನಾಶಕಾರಿ ಪರಿಣಾಮಗಳಿಂದ ಭಾರತದ ಯಾವುದೇ ನಗರವೂ ಹೊರತಾಗಿಲ್ಲ ಎಂಬುದನ್ನು ನಾವು ಗಮನಿಸಬೇಕಾದ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.
ಭಾರಿ ಮಳೆ ಕಾರಣ ಬೆಂಗಳೂರಿನ ಪ್ರಮುಖ ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬೆಂಗಳೂರಿನ ಈ ಪರಿಸ್ಥಿತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಮಾಡಲಾಗುತ್ತಿದೆ. ಈ ಸ್ಥಿತಿಯಲ್ಲಿ ಬೆಂಗಳೂರಿನ ಬೆಂಬಲಕ್ಕೆ ನಿಂತಿರುವ ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಅವರು, “ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ಭಾರತದ ಯಾವುದೇ ನಗರವು ನಿರೋಧಕವಾಗಿಲ್ಲ. ಕ್ಷಿಪ್ರ ನಗರೀಕರಣದ ಸವಾಲುಗಳನ್ನು ನಿಭಾಯಿಸಲು ನಗರ ಯೋಜನೆ ಮತ್ತು ಆಡಳಿತದಲ್ಲಿ ದಿಟ್ಟ ಸುಧಾರಣೆಗಳನ್ನು ತರಬೇಕಾಗಿದೆ ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಅವರು ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಗಮನವನ್ನೂ ಸೆಳೆದಿದ್ದಾರೆ.ರಾವ್ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರರೂ ಆಗಿದ್ದಾರೆ.
ಜಲಾವೃತವಾಗಿರುವ ಬೆಂಗಳೂರನ್ನು ಅಪಹಾಸ್ಯ ಮಾಡುವ ಎಲ್ಲರ ಗಮನಕ್ಕೆ: ನಮ್ಮ ನಗರಗಳು ನಮ್ಮ ಪ್ರಾಥಮಿಕ ಆರ್ಥಿಕ ಇಂಜಿನ್‌ಗಳಾಗಿದ್ದು, ರಾಜ್ಯಗಳ/ದೇಶದ ಬೆಳವಣಿಗೆಯನ್ನು ವೇಗದ ನಗರೀಕರಣ ಮತ್ತು ಉಪ-ನಗರೀಕರಣದೊಂದಿಗೆ, ನಾವು ಉನ್ನತೀಕರಣಕ್ಕೆ ಸಾಕಷ್ಟು ಬಂಡವಾಳವನ್ನು ತುಂಬದ ಕಾರಣ ಮೂಲಸೌಕರ್ಯಗಳು ಕುಸಿಯುತ್ತಿವೆ. ನನ್ನ ರಾಜ್ಯದ ರಾಜಧಾನಿ ಹೈದರಾಬಾದ್ ಸೇರಿದಂತೆ ಇಂದು ಯಾವುದೇ ಭಾರತೀಯ ನಗರವೂ ತಾಪಮಾನ ಬದಲಾವಣೆಯ ವಿನಾಶಕಾರಿ ಪರಿಣಾಮ ಎದುರಿಸಿ ನಿಲ್ಲಬಲ್ಲ ಸಾಮರ್ಥ್ಯ ಹೊಂದಿಲ್ಲ. ಭಾರತವು ಬೆಳೆಯುವುದನ್ನು ಮುಂದುವರೆಸಬೇಕಾದರೆ, ನಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತಮವಾದ, ಸಂಘಟಿತ ಬಂಡವಾಳದ ಹಂಚಿಕೆಗಳು ಮೂಲಭೂತ ಸೌಕರ್ಯಗಳಲ್ಲಿ ಮೂಲಭೂತ ಸುಧಾರಣೆಗೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇಂತಹ ಸಮಸ್ಯೆಗಳನ್ನು ಪರಿಹರಿಸಲು ಆಮೂಲಾಗ್ರ ಕ್ರಮಗಳ ಅಗತ್ಯವಿದೆ. “ನಮಗೆ ನಗರ ಯೋಜನೆ ಮತ್ತು ಆಡಳಿತದಲ್ಲಿ ದಿಟ್ಟ ಸುಧಾರಣೆಗಳ ಅಗತ್ಯವಿದೆ. ಬೆಂಗಳೂರಿನ ಕೆಲವು ನಾಯಕರು ಈ ಹಿಂದೆ ಇದೇ ರೀತಿಯ ಸ್ಥಿತಿ ಉಂಟಾಗಿದ್ದಾಗ ಹೈದರಾಬಾದ್ ನಿವಾಸಿಗಳನ್ನು “ಅಪಹಾಸ್ಯ” ಮಾಡಿದ್ದರು. ಆದರೆ ಇಂತಹ ಸಂದರ್ಭಗಳಲ್ಲಿ “ಪರಸ್ಪರರ ಅನುಭವಗಳಿಂದ ಕಲಿಯುವ ಮತ್ತು ಸಾಮೂಹಿಕ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾದ ” ಅಗತ್ಯವಿದೆ. ಈಗ ಹೈದರಾಬಾದ್‌ನಲ್ಲಿರುವ ಕೆಲವು ಸ್ನೇಹಿತರು ನಾನು ಹೇಳುವುದನ್ನು ಇಷ್ಟಪಡುವುದಿಲ್ಲ ಎಂಬುದೂ ನನಗೆ ತಿಳಿದಿದೆ ಎಂದೂ ಅವರು ಸೇರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!