ತೆಲಂಗಾಣ ಸುರಂಗ ದುರಂತ: 15 ದಿನದ ಬಳಿಕ ಓರ್ವನ ಮೃತದೇಹ ಪತ್ತೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣ ಸುರಂಗದಲ್ಲಿ ಸಿಲುಕಿದ್ದ 8 ಕಾರ್ಮಿಕರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ.

ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಎಸ್ಎಲ್ಬಿಸಿ ಸುರಂಗದಲ್ಲಿ ಮೃತದೇಹವು ಯಂತ್ರದಲ್ಲಿ ಸಿಲುಕಿಕೊಂಡಿತ್ತು. ಹೀಗಾಗಿ ಅದನ್ನು ಹೊರತೆಗೆಯಲು ಯಂತ್ರವನ್ನು ಕತ್ತರಿಸಲಾಗುತ್ತಿದೆ ಎಂದು ರಕ್ಷಣಾ ತಂಡ ತಿಳಿಸಿದೆ.

ಫೆಬ್ರವರಿ 22 ರಿಂದ 8 ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದರು. 15 ದಿನಗಳಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ಭಾನುವಾರ ವೇಗ ಸಿಕ್ಕಿದೆ. ಕೇರಳದಿಂದ ಬಂದ ವಿಶೇಷ ತರಬೇತಿ ಪಡೆದ ಶೋಧನಾ ನಾಯಿಗಳು ಮಣ್ಣಿನಡಿ ಮೃತದೇಹ ಇರುವ ಬಗ್ಗೆ ಸೂಚನೆ ನೀಡಿವೆ. ಸುರಂಗದ ಕೊನೆಯ ಭಾಗದಲ್ಲಿರುವ ಡಿ-2 ಪಾಯಿಂಟ್ ಬಳಿ ನಾಯಿಗಳು ಕಾರ್ಮಿಕರ ಇರುವಿಕೆಯನ್ನು ಪತ್ತೆ ಮಾಡಿವೆ. ಇದು ಅಪಘಾತ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿದೆ.

ತರಬೇತಿ ಪಡೆದ ಶ್ವಾನಗಳು ಮೃತದೇಹದ ಇರುವಿಕೆಯನ್ನು ಸೂಚಿಸಿದ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ಎಚ್ಚರಿಕೆಯಿಂದ ಮಣ್ಣನ್ನು ಅಗೆಯುತ್ತಿದ್ದರು. ಇದೇ ಸ್ಥಳದಲ್ಲಿ ಮಣ್ಣಿನಡಿ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ. ಶನಿವಾರ ರಾತ್ರಿ ಮಣ್ಣಿನಡಿ ಆರು ಅಡಿ ಆಳದಲ್ಲಿ ವ್ಯಕ್ತಿಯ ದೇಹದ ಭಾಗಗಳು ಪತ್ತೆಯಾಗಿವೆ. ಮೃತದೇಹವನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಆ ಪ್ರದೇಶವನ್ನು ಅಗೆದರು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!