ಏನು ಅಕ್ಷಯ ಪಾತ್ರೆ ಎಂದು ಬಿಡಿಸಿ ಹೇಳಲಿ: ದೇವೇಗೌಡರ ಮಾತಿಗೆ ಡಿ.ಕೆ ಶಿವಕುಮಾರ್ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಂಗ್ರೆಸ್ ಕೊಟ್ಟ ಖಾಲಿ ಚೊಂಬನ್ನು ಮೋದಿ ಅಕ್ಷಯ ಪಾತ್ರೆ ಮಾಡಿದ್ದಾರೆ ಎಂದು ಹೇಳಿದ್ದ ದೇವೇಗೌಡರ ಮಾತಿಗೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದು, ಏನು ಅಕ್ಷಯ ಪಾತ್ರೆ ಅಂತಾ ಹೆಚ್‌ಡಿಡಿ ಬಿಡಿಸಿ ಹೇಳಲಿ ಎಂದು ಹೇಳಿದ್ದಾರೆ.

ಕೆಆರ್ ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಕೊಟ್ಟ ಖಾಲಿ ಚೊಂಬನ್ನು ಜನರ ಮುಂದಿಟ್ಟಿದ್ದೇವೆ. ಏನು ಅಕ್ಷಯ ಪಾತ್ರೆ ಎಂದು ಬಿಡಿಸಿ ಹೇಳಲಿ. ಹೊಟ್ಟೆ ತುಂಬಿತಾ? ಜೇಬು ತುಂಬಿತಾ? ಹೇಳಲಿ. ಇದೇ ದೇವೇಗೌಡರು ಬಿಜೆಪಿ ಬಗ್ಗೆ ಏನು ಹೇಳಿದ್ರು ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಬಿಜೆಪಿ ಬಗ್ಗೆ ಏನೇನು ಮಾತನಾಡಿದ್ರು? ಯಡಿಯೂರಪ್ಪ ಜೆಡಿಎಸ್‌ ಬಗ್ಗೆ ಏನು ಹೇಳಿದ್ರು. ಎಲ್ಲವನ್ನೂ ರೀ ಕಾಲ್ ಮಾಡಲಿ ಎಂದು ತಿಳಿಸಿದರು.

ಹೆಚ್‌ಡಿಡಿ ಹೇಳಿದ್ದೇನು?
ರಾಜ್ಯದ ಮುಖ್ಯಮಂತ್ರಿಗಳು ಚೆಂಬನ್ನ ಯಾರಿಗೆ ಕೊಟ್ಟರು? ಈ ಚೊಂಬನ್ನು 10 ವರ್ಷ ಮನಮೋಹನ್ ಸಿಂಗ್ ಕೊಟ್ಟಿದ್ದು. 2004-2014 ಅವಧಿಯಲ್ಲಿ ಈ ರಾಷ್ಟ್ರ ಆಳಿದರು, ಸೋನಿಯಾ ಗಾಂಧಿ ಯುಪಿಎ ಚೇರ್ ಮನ್ ಆಗಿದ್ರು. 2 ಜಿ ಸ್ಕ್ಯಾಮ್, ಕಲ್ಲಿದ್ದಲು ಹಗರಣ ಎಷ್ಟು ಭ್ರಷ್ಟಾಚಾರ ಹೀಗೆ ಎಷ್ಟು ಭ್ರಷ್ಟಾಚಾರಗಳು ನಡೆದಿವೆ. ಈ ರಾಷ್ಟ್ರದ ಸಂಪತ್ತನ್ನ ಸೂರೆ ಮಾಡಿ ಚೆಂಬು ಬರಿದಾಗಿತ್ತು. ಈ ಕಾಂಗ್ರೆಸ್‌ನವರು ಬರೀ ಚೆಂಬನ್ನ ಯಾರ್ ಕೈಗೆ ಕೊಟ್ರು‌. ಕಾಂಗ್ರೆಸ್ ಕೊಟ್ಟ ಖಾಲಿ ಚೊಂಬನ್ನು ಮೋದಿ ಅಕ್ಷಯ ಪಾತ್ರೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!