ಈ ಸಲ ಕಪ್‌ ನಮ್ದೆ ಅಂತ ಈಗ್ಲೇ ಹೇಳ್ಬೇಡ್ರಪ್ಪ: ಅನಿಲ್‌ ಕುಂಬ್ಳೆ ಹಿಂಗಂದಿದ್ದು ಯಾಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಐಪಿಎಲ್ ಫೈನಲ್ ಆಡುತ್ತಿರುವುದಕ್ಕೆ, ಇದೇ ತಂಡದ ಮಾಜಿ ನಾಯಕರೂ ಆಗಿರುವ ಅನಿಲ್ ಕುಂಬ್ಳೆ ಶುಭ ಹಾರೈಸಿದ್ದಾರೆ.

ಆದರೆ, ಆರ್ಸಿಬಿ ಗೆಲ್ಲುತ್ತೆ ಎಂದು ಈಗಲೇ ಹೇಳಬೇಡಿ ಎಂದು ಅನಿಲ್‌ ಕುಂಬ್ಳೆ ಅವರು ಹೇಳಿದ್ದಾರೆ. ಆರ್ಸಿಬಿ ಗೆಲ್ಲಬೇಕು ಎಂಬುದು ನಮ್ಮ ಹೃದಯದ ಮಾತು. ಹಾಗೆಯೇ ಆಗಲಿ ಎಂದು ಹಾರೈಸೋಣ ಎಂದರು.

ಪಂಜಾಬ್ ತಂಡದಲ್ಲೂ ನಾನು ಆಡಿದ್ದೆ. ಆರ್ಸಿಬಿಯಲ್ಲೂ ಆಡಿದ್ದೆ. ಎರಡೂ ತಂಡಗಳು ಬೆಸ್ಟ್. ಉತ್ತಮ ಪ್ರದರ್ಶನ ನೀಡಿದ ತಂಡಗಳೇ ಫೈನಲ್ ಪ್ರವೇಶಿಸಿವೆ. ಆರ್ಸಿಬಿ ಗೆಲ್ಲಲಿ ಎಂಬುದು ಹಾರೈಕೆ ಎಂದು ಅನಿಲ್‌ ಕುಂಬ್ಳೆ ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!