ದೆಹಲಿಯಲ್ಲಿ ಭಾರೀ ಬಂದೋಬಸ್ತ್‌ ನಡುವೆ ಧಾರ್ಮಿಕ ಕೇಂದ್ರಗಳ ತೆರವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಧಾನಿ ದೆಹಲಿಯಲ್ಲಿ ಭಾನುವಾರ ಬೆಳಗ್ಗೆ ದೇವಸ್ಥಾನ ಮತ್ತು ದರ್ಗಾವನ್ನು ಅಧಿಕಾರಿಗಳು ಕೆಡವಿದ್ದಾರೆ. ದಿಲ್ಲಿಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭಾನುವಾರ ಬೆಳಗ್ಗೆ ಭಾರೀ ಪೊಲೀಸ್ ಉಪಸ್ಥಿತಿಯ ನಡುವೆ ಭಜನ್ ಪುರ ಚೌಕ್‌ನಲ್ಲಿರುವ ಹನುಮಾನ್ ದೇವಾಲಯ ಮತ್ತು ದರ್ಗಾ ತೆರವು ಮಾಡಿದ್ದಾರೆ.

ಧ್ವಂಸ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಹರಾನ್‌ಪುರ ಹೆದ್ದಾರಿ ನಿರ್ಮಾಣಕ್ಕಾಗಿ ರಸ್ತೆಯನ್ನು ಅಗಲಗೊಳಿಸಲು ದೇವಸ್ಥಾನ ಮತ್ತು ದರ್ಗಾವನ್ನು ಕೆಡವಲಾಯಿತು.

ಭಜನ್ ಪುರ ಚೌಕ್‌ನಲ್ಲಿರುವ ದೇವಾಲಯ ಮತ್ತು ದರ್ಗಾ ತೆರವುಗೊಳಿಸುವ ಪ್ರಕ್ರಿಯೆ ಬಹಳ ಶಾಂತಿಯುತವಾಗಿ ಮಾಡಲಾಗಿದೆ ಎಂದು ಈಶಾನ್ಯ ದೆಹಲಿಯ ಡಿಸಿಪಿ ಎನ್ ಟಿರ್ಕಿ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಎರಡು ಧಾರ್ಮಿಕ ಕೇಂದ್ರಗಳನ್ನು ತೆಗೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!