ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಬಾಂದ್ರಾ-ವರ್ಲಿ ಸೇತುವೆಯಲ್ಲಿ ಕಾರು ಅಪಘಾತ ಸಂಭವಿಸಿದ್ದು, ಐದು ಮಂದಿ ಮೃತಪಟ್ಟಿದ್ದಾರೆ.
ಬುಧವಾರ ಮುಂಜಾನೆ 3:30ಕ್ಕೆ ರಸ್ತೆ ಬದಿಯಲ್ಲಿ ಅಪಘಾತವಾಗಿ, ಆ ವಾಹನ ಬದಿಯಲ್ಲಿ ನಿಂತಿತ್ತು. ವೇಗವಾಗಿ ಬಂದ ಕಾರ್ವೊಂದು ನಿಂತಿದ್ದ ಕಾರ್ಗೆ ಡಿಕ್ಕಿ ಹೊಡೆದಿದ್ದು, ಐದು ಮಂದಿ ಮೃತಪಟ್ಟಿದ್ದಾರೆ, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೊದಲ ಅಪಘಾತದಲ್ಲಿ ಗಾಯಗೊಂಡವರನ್ನು ಬಾಂದ್ರಾದ ವರ್ಲಿ ಲೇನ್ಗೆ ಕರೆದೊಯ್ಯಲು ತಂಡ ಸಿದ್ಧತೆ ನಡೆಸುವಾಗ, ಅತಿ ವೇಗವಾಗಿ ಬಂದ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆ. ಪ್ರಧಾನಿ ಮೋದಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಆತ್ಮಧೈರ್ಯದಿಂದಿರಿ ಎಂದಿದ್ದಾರೆ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದಿದ್ದಾರೆ.