ಮಹಾರಾಷ್ಟ್ರದಲ್ಲಿ ಭಯಾನಕ ಘಟನೆ: ವೇಗವಾಗಿ ಓಡಿ ಬಂದ ನೀಲಗಾಯ್ ಬೈಕ್ ​ಗೆ ಡಿಕ್ಕಿ, ಸವಾರ ಮೃತ್ಯು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆ ದಾಟಲು ವೇಗವಾಗಿ ಓಡಿ ಬಂದ ನೀಲಗಾಯ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಇನಾಯತ್ ನಗರ ಠಾಣಾ ವ್ಯಾಪ್ತಿಯ ಮಿಥೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ದುರದೃಷ್ಟವಶಾತ್ ವಿಜಯಿ ಪಾಠಕ್ ಗ್ರಾಮದ ಮುಕೇಶ್​ ಪಾಂಡ್ಯ (28) ಮೃತಪಟ್ಟಿದ್ದಾರೆ. ಬೈಕ್ ಸವಾರ ಪಾಂಡ್ಯ ಇನಾಯತ್ ನಗರ ಮಾರುಕಟ್ಟೆಗೆ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಾಏಕಿ ನೀಲಗಾಯ್ ರಸ್ತೆಯನ್ನು ಅತಿವೇಗದಲ್ಲಿ ದಾಟಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ರಕ್ತದ ಮಡುವಿನಲ್ಲಿ ರಸ್ತೆಗೆ ಬಿದ್ದಿದ್ದಾನೆ. ನೀಲಗಾಯ್‌ಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಿಯ ಕೊಂಬುಗಳು ಸವಾರನ ಎದೆಗೆ ಚುಚ್ಚಿದೆ.

ಸ್ಥಳೀಯರು ಕೂಡಲೇ ಆಂಬ್ಯುಲೆನ್ಸ್ ಮೂಲಕ ಸಂತ್ರಸ್ತರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!