ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರ್, ಬೈಕ್ ಹಾಗೂ ಲಾರಿ ಸರಣಿ ಅಪಘಾತದಲ್ಲಿ ಭೋಜ್ಪುರಿ ನಟಿ ಅಂಚಲ್ ತಿವಾರಿ, ಸಿಮ್ರನ್ ಶ್ರೀವಾತ್ಸವ್, ಗಾಯಕ ಚೋಟು ಪಾಂಡೆ ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಬಿಹಾರದ ಕೈಮೂರ್ನ್ ದೇವಕಲಿ ಗ್ರಾಮದ ಬಳಿ ಕಾರ್ ಬೈಕ್ ಡಿಕ್ಕಿಯಾಗಿದೆ. ಹಿಂದಿನಿಂದ ವೇಗವಾಗಿ ಬಂದ ಲಾರಿ ಅಪಘಾತಕ್ಕೀಡಾಗಿದ್ದ ಕಾರ್ಗೆ ಗುದ್ದಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ಧಾವಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೆಲೆಬ್ರಿಟಿಗಳು ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.