ಹೊಸದಿಗಂತ ವರದಿ, ಅಂಕೋಲಾ
ವಿವಿಧ ಕಳುವು ಕೃತ್ಯಗಳಲ್ಲಿ ತೊಡಗಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ರಾಷ್ಟ್ರೀಯ ಹೆದ್ದಾರಿ 63 ರಾಮನಗುಳಿ ಬಳಿ ಅಂಕೋಲಾ ಪೊಲೀಸರು ಸೆರೆಹಿಡಿದಿದ್ದಾರೆ.
ಮಹಾರಾಷ್ಟ್ರದ ಠಾಣಾ ನಿವಾಸಿ ಮಹಮ್ಮದ ಸಲೀಂ ಮಹಮ್ಮದ ಹನೀಫ ಶೇಖ್ (30) ಮತ್ತು ಉತ್ತರ ಪ್ರದೇಶ ಬಲರಾಮಪುರ ನಿವಾಸಿ ನಮ್ರೋಜ್ ಖಾನ್ ಮಹಮ್ಮದ್ ಖಾನ್ (32) ಬಂಧಿತ ಆರೋಪಿಗಳಾಗಿದ್ದು ಇವರು ಕಲಘಟಗಿ ದಾಸ್ತಿನಕೊಪ್ಪದಲ್ಲಿ ಕಳುವು ಮಾಡಿದ ಸುಮಾರು 5 ಸಾವಿರ ಮೌಲ್ಯದ ವಾಹನಗಳ ವೀಲ್ ತೆಗೆಯುವ ಯಂತ್ರ ಮತ್ತು ಬೇರೆ ಬೇರೆ ಭಾಗಗಳಲ್ಲಿ ಕಳುವು ಮಾಡಿದ 13 ಸಾವಿರ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 6 ಮೊಬೈಲ್ ಪೋನುಗಳು ಮತ್ತು 1.10 ಲಕ್ಷ ಮೌಲ್ಯದ ಟಾಟಾ ಇಂಡಿಗೋ ಕಾರು ವಶಪಡಿಸಿಕೊಳ್ಳಲಾಗಿದೆ.
ರಾಮನಗುಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿ.ಎಚ್ 01 ಎ.ಸಿ 7798 ನೋಂದಣಿಯ ಕಾರಿನಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಗಳನ್ನು ಅಂಕೋಲಾ ಪಿ.ಎಸ್. ಐ ಮಹಾಂತೇಶ ಮತ್ತು ಸಿಬ್ಬಂದಿ ತಡೆದು ವಿಚಾರಣೆ ನಡೆಸಿದಾಗ ಕಾರಿನಲ್ಲಿ ಕಳ್ಳತನ ಮಾಡಿದ ವಸ್ತುಗಳು ಇರುವುದು ಬೆಳಕಿಗೆ ಬಂದಿದೆ.
ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರ ನೇತೃತ್ವದಲ್ಲಿ ಬಂಧಿತ ವ್ಯಕ್ತಿಗಳ ಕುರಿತಂತೆ ಹೆಚ್ಚಿನ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ