ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ.
ಈ ಘಟನೆಯ ಕುರಿತು ಸ್ಯಾಂಡಲ್ವುಡ್ ನಟಿ ರಮ್ಯಾ ಮಾತನಾಡಿದ್ದು, ಉಗ್ರರಿಗೆ ಧರ್ಮ ಇಲ್ಲ ಎಂದು ಹೇಳಿದ್ದಾರೆ.
ಉಗ್ರರಿಗೆ ಧರ್ಮ, ಮನುಷ್ಯತ್ವ ಏನೂ ಇರುವುದಿಲ್ಲ. ಮೋದಿ ಸರ್ಕಾರವು ಈ ಬಗ್ಗೆ ಸ್ಟ್ರೀಕ್ಟ್ ಆ್ಯಕ್ಷನ್ ತೆಗೋಬೇಕು. ಯಾವ ಸಮಯದಲ್ಲಿ ಹೀಗೆ ಆಗುತ್ತೆ ಅಂತ ಊಹಿಸೋಕೆ ಆಗಲ್ಲ.
ಜಮ್ಮು ಕಾಶ್ಮೀರ್ ಬಾರ್ಡರ್ಸ್ನಲ್ಲಿ ಇನ್ನಷ್ಟು ಹೆಚ್ಚಿನ ರಕ್ಷಣೆ ಕೊಡಬೇಕು. ಸಂಪೂರ್ಣವಾಗಿ ಭದ್ರತಾ ಲೋಪವಾಗಿದೆ. ಇದು ಇಂಟೆಲಿಜೆನ್ಸ್ ಫೇಲ್ಯೂರ್. ಅದನ್ನ ನಾವು ಪ್ರಶ್ನಿಸಬೇಕು ಎಂದರು.