ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರತಕ್ಷತೆ, ಅರಿಶಿಣ ಶಸ್ತ್ರ, ಬಳೆ ಶಾಸ್ತ್ರ ಹೀಗೆ ಎಲ್ಲ ಶಾಸ್ತ್ರಗಳನ್ನು ಮುಗಿಸಿ ವರ ಇನ್ನೇನು ವಧುವಿನ ಕತ್ತಿಗೆ ತಾಳಿ ಕಟ್ಟಬೇಕು ಎನ್ನುವಾಗ ವಧು ಮದುವೆ ಬೇಡ ಎಂದು ಕಣ್ಣೀರಿಟ್ಟಿದ್ದಾಳೆ.
ಹೊಸದುರ್ಗದ ಚಿಕ್ಕಬಾಲ್ಯಕೆರೆಯಲ್ಲಿ ನಡೆದ ಘಟನೆ ಇದು. ಐಶ್ವರ್ಯಾ ಹಾಗೂ ಮಂಜುನಾಥ್ ಮದುವೆಯನ್ನು ಹಿರಿಯರು ನಿಶ್ಚಯ ಮಾಡಿದ್ದರು. ಇನ್ನೇನನು ಮಂಜುನಾಥ್ ತಾಳಿ ಕಟ್ಟಬೇಕು ಎಂದಾಗ ವಧು ಬೇಡ ಎಂದು ತಡೆದಿದ್ದಾಳೆ. ಕುಟುಂಬದವರು ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಐಶ್ವರ್ಯಾ ಮದುವೆ ಬೇಡ ಎಂದು ಪಟ್ಟು ಹಿಡಿದಿದ್ದಾಳೆ.
ಈ ವರ್ತನೆಯಿಂದ ವರನ ಕಡೆಯವರಿಗೂ ಕಿರಿಕಿರಿಯಾಗಿದ್ದು ಎರಡು ಕುಟುಂಬಗಳ ನಡುವೆ ಜಗಳವಾಗಿ ಮದುವೆ ಮುರಿದುಬಿದ್ದಿದೆ. ಐಶ್ಚರ್ಯಾಗೆ ಓದಲು ಆಸೆ ಇರುವುದೇ ಮದುವೆ ಬೇಡ ಎನ್ನಲು ಕಾರಣ ಎನ್ನಲಾಗಿದೆ.