ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಲ್ದಾಣದಲ್ಲಿ ಬಸ್ ಇದೆ, ಬಸ್ನಲ್ಲಿ ಜನ ಇದ್ದಾರೆ ಆದ್ರೂ ಬಸ್ ಮುಂದಕ್ಕೆ ಹೋಗ್ತಿಲ್ಲ, ಕಾದು ಕಾದು ಸುಸ್ತಾದ ಪ್ರಯಾಣಿಕನೊಬ್ಬ ಏನು ಅವಾಂತರ ಮಾಡಿದ್ದಾನೆ ನೋಡಿ..
ಬೀದರ್ನ ಔರಾದ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಊರಿಗೆ ಹೋಗೋ ಅರ್ಜೆಂಟ್ನಲ್ಲಿ ಡ್ರೈವರ್ ಎಷ್ಟೊತ್ತಾದರೂ ಬಾರದ ಕಾರಣ ತಾನೇ ಬಸ್ ಓಡಿಸಿಕೊಂಡು ಹೋಗಿದ್ದಾನೆ.
ಹೌದು, ಯಶಪ್ಪ ಸೂರ್ಯವಂಶಿ ಎಂಬಾತ ತನ್ನೂರಿಗೆ ಹೋಗೋಕೆ ಬಸ್ ಇಲ್ಲ, ಇದ್ದರೂ ಇನ್ನೂ ಹೊರಟಿಲ್ಲ ಎಂಬ ಕೋಪಕ್ಕೆ ತಾನೇ ಬಸ್ ಚಲಾಯಿಸಿ ಡಿವೈಡರ್ ಮೇಲೆ ಬಸ್ನ್ನು ಹತ್ತಿಸಿದ್ದಾನೆ. ಆತ ಸಿಕ್ಕಾಪಟ್ಟೆ ಕುಡಿದಿದ್ದು ಜನರ ಜೀವದ ಜೊತೆ ಆಟವಾಡಿದ್ದಾನೆ ಎಂದು ಪ್ರಯಾಣಿಕರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.