ಹೊಸದಿಗಂತ ವರದಿ,ಹುಬ್ಬಳ್ಳಿ:
ರಾಜ್ಯದ ಪ್ರಕಾರ ಗಡಿ ವಿವಾದ ಮುಗಿದು ಹೋಗಿರುವ ಅಧ್ಯಯವಾಗಿದೆ. ಪದೇ ಪದೇ ಮಹಾರಾಷ್ಟ್ರ ಈ ಬಗ್ಗೆ ಖ್ಯಾತೆ ತೆಗೆಯುತ್ತಿದ್ದು, ಅಲ್ಲಿಯ ಸಚಿವರು ಸದ್ಯ ಬೆಳಗಾವಿಗೆ ಬರುವುದು ಬೇಡಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಮುಖ್ಯಕಾರ್ಯದರ್ಶಿಯವರು ಮಹಾರಾಷ್ಟ್ರ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತವಾಗಿ ತಿಳಿಸಿದ್ದಾರೆ ಎಂದರು.
ಮಹಾ ಸಚಿವರು ಬಂದರೆ ರಾಜ್ಯದ ಗಡಿಭಾಗದಲ್ಲಿ ಕಾನೂನು, ಸುವ್ಯವಸ್ಥೆ ಸಮಸ್ಯೆಯಾಗುತ್ತದೆ. ಹೀಗಾಗಿ ಅವರು ಬರುವುದು ಸರಿಯಲ್ಲ. ಸಚಿವರು ಬರುತ್ತೀನೆಂದು ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ. ಮಹಾರಾಷ್ಟ್ರ ಮತ್ತು ಕರ್ನಾಟಕ ಜನರ ನಡುವೆ ಸಾಮರಸ್ಯವಿದೆ ಎಂದು ತಿಳಿಸಿದರು.