ಸ್ಪರ್ಧಿಸುವ ಕ್ಷೇತ್ರ ನಿರ್ಧಾರವಾಗಿಲ್ಲ, ಅನೇಕ ಕ್ಷೇತ್ರದಿಂದ ಆಹ್ವಾನ ಇದೆ : ಸಿದ್ದರಾಮಯ್ಯ

ಹೊಸದಿಗಂತ ವರದಿ ಶಿವಮೊಗ್ಗ :

ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಒಂದು ಎಂಬುದರ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಅನೇಕ ಕ್ಷೇತ್ರಗಳಲ್ಲಿ ಕರೆಯುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇನ್ನೊಂದು‌ ತಿಂಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ವರುಣದಲ್ಲಿ ಮಗ ಸ್ಪರ್ಧೆ ಮಾಡಲಿದ್ದಾನೆ. ಕೋಲಾರ ಸೇರಿದಂತೆ ಬೇರೆ ಬೇರೆ ಕಡೆ ಆಹ್ವಾನ ಇದೆ ಎಂದರು.

ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಈಗ ಬಿಜೆಪಿ ಹೆಚ್ಚಿಸಿರುವ ಎಸ್ ಸಿ, ಎಸ್ ಟಿ ಮೀಸಲಾತಿಯಿಂದ ಬಿಜೆಪಿ ಲಾಭವಿಲ್ಲ. ನಮಗೆ ಲಾಭವಾಗಲಿದೆ. ನಾಗಮೋಹನ್ ದಾಸ್ ಸಮಿತಿ‌ ರಚಿಸಿದ್ದೇ ಸಮ್ಮಿಶ್ರ ಸರ್ಕಾರದಲ್ಲಿ ಎಂದರು.

ಮೀಸಲಾತಿ ಬಗ್ಗೆ ಶ್ರೀರಾಮುಲು ಒಮ್ಮೆಯೂ ವಿಧಾನ ಸಭೆಯಲ್ಲಿ ಮಾತನಾಡಿಲ್ಲ. ಈಗ‌ ಮೀಸಲಾತಿ ಹೆಚ್ಚಳದಿಂದ ಸಿದ್ದರಾಮಯ್ಯಗೆ ನಿದ್ದೆ ಬರುತ್ತಿಲ್ಲವೆಂದು ಹೇಳುತ್ತಿದ್ದಾರೆ.‌ತಾನು ಪೆದ್ದನೆಂದು ಆತನೇ ಒಪ್ಪಿಕೊಂಡಿದ್ದಾನೆ ಎಂದು ಟೀಕಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!