ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದೊಂದಿಗೆ ಸಂಘರ್ಷದ ನಡುವೆ ದೆಹಲಿಯ ಆಪ್ ಸರ್ಕಾರ ಬರೋಬ್ಬರಿ 78,800 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದೆ.
ಹಣಕಾಸು ಸಚಿವ ಕೈಲಾಶ್ ಗೆಹ್ಲೋಟ್ ಇದೇ ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಮನೀಶ್ ಸಿಸೋಡಿಯಾ ಬಂಧನದ ನಂತರ ಗೆಹ್ಲೋಟ್ ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತಿದ್ದರು.
ಸ್ವಚ್ಛ ಯಮುನಾಕ್ಕಾಗಿ ಕ್ರಿಯಾ ಯೋಜನೆ, ಎಲ್ಲ ಕಾಲೋನಿಗಳ ಒಳಚರಂಡಿ ಜಾಲ ಸಂಕರ್ಪ, 29 ಹೊಸ ಮೇಲ್ಸೇತುವೆಗಳು, ಪಿಡಬ್ಲ್ಯೂಡಿ ರಸ್ತೆ ಜಾಲ ನವೀಕರಣ, ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ನೆರವು, ಇ-ಬಸ್, ಸಾರ್ವಜನಿಕ ಸಾರಿಗೆ ಉನ್ನತೀರಕರಣಕ್ಕೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ.