ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಳೆಗಾಗಿ ಹಪಹಪಿಸುತ್ತಿದ್ದ ಜನರಿಗೆ ಇದೀಗ ವರುಣ ಕೃಪೆ ತೋರಿಸಿದ್ದಾನೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿಯೂ ಅಬ್ಬರದ ಮಳೆಯಾಗಿದ್ದು, ಗಂಟೆಗೂ ಹೆಚ್ಚುಕಾಲ ಸುರಿದ ವರ್ಷಧಾರೆ ಇಳೆಗೆ ಹೊಸ ಕಳೆ ನೀಡಿತ್ತು.
ಈ ಜೋರು ಮಳೆಗೆ ನರಸೀಪುರದಲ್ಲಿ ಭಾರೀಮರಗಳು ಧರೆಗುರುಳಿದ್ವು, ವಾಹನಗಳ ಮೇಲೆಯೇ ಮರವೊಂದು ಉರುಳಿಬಿದ್ದ ಜನರನ್ನ ಆತಂಕಕ್ಕೆ ತಳ್ಳಿತ್ತು. ಇನ್ನು ಮೈಸೂರು ಮಾನಂದವಾಡಿ ರಸ್ತೆಯಲ್ಲಿ ಕಾಲೇಜು ಬಸ್ವೊಂದು ರಸ್ತೆಯಲ್ಲಿ ಬರುವಾಗಲೇ ವಿದ್ಯುತ್ ಕಂಬ ಬಸ್ನ ಮೇಲೆ ಬಿದ್ದಿದೆ. ಬಸ್ನಲ್ಲಿ ವಿದ್ಯಾರ್ಥಿಗಳು ಕುಳಿತಿದ್ದರು.
ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿ ಅವರನ್ನು ಮನೆಗೆ ತಲುಪಿಸಲಾಗಿದೆ.