ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ವೇದಿಕೆ ಮುಂಭಾಗದ ಸಾಲುಗಳನ್ನು ವಿಐಪಿಗಳ ಬದಲಾಗಿ ಶ್ರಮಜೀವಿಗಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ.
ಸಾಮಾನ್ಯ ಜನರ ಸಹಭಾಗಿತ್ವ ಥೀಮ್ನಲ್ಲಿ ಈ ಬಾರಿ ಗಣರಾಜ್ಯೋತ್ಸವ ಪರೇಡ್ ನಡೆಯಲಿದೆ. ರಿಕ್ಷಾ ಎಳೆಯುವವರು, ತರಕಾರಿ ಮಾರುವವರು, ದಿನಸಿ ವ್ಯಾಪಾರಿಗಳು, ಕಾರ್ಮಿಕರು ಹೀಗೆ ಶ್ರಮಜೀವಿಗಳನ್ನು ಮೊದಲ ಸೀಟ್ನಲ್ಲಿ ಕೂರಿಸಲು ನಿರ್ಧರಿಸಲಾಗಿದೆ.
ಇವರುಗಳು ನಿಜವಾಗಲೂ ಗಣರಾಜ್ಯ ದೇಶದ ಪ್ರತಿನಿಧಿಗಳಾಗಿದ್ದಾರೆ. ಹಾಗಾಗಿ ಅವರಿಗೆ ಈ ಬಾರಿ ಸಮಾನ ಅವಕಾಶ ನೀಡಲಾಗಿದೆ.