ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದಲ್ಲಿ ಇದೀಗ ನಾಲ್ಕನೇ ಚಿರತೆಯನ್ನು ಸೆರೆಹಿಡಿಯಲಾಗಿದೆ. ತಿರುಪತಿ, ತಿರುಮಲ ಪಾದಯಾತ್ರೆ ವೇಳೆ ದಾಳಿ ಮಾಡಿ ಬಾಲಕಿಯನ್ನು ಕೊಂದಿದ್ದ ಚಿರತೆ ಇದಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿದಿದ್ದಾರೆ.
ಇಂದು ಬೆಳಗಿನ ಜಾವ ತಿರುಮಲದಲ್ಲಿ ನಾಲ್ಕನೇ ಚಿರತೆಯನ್ನು ಸೆರೆಹಿಡಿದಿದ್ದಾರೆ. ಬಾಲಕಿ ಸಾವಿನ ನಂತರ ತಿರುಪತಿ ಪಾದಯಾತ್ರೆ ಮಾಡಲು ಜನರು ಹಿಂದೇಟು ಹಾಕುತ್ತಿದ್ದು, ತಿರುಮಲ ಅರಣ್ಯದಲ್ಲಿ ಚಿರತೆಗಾಗಿ ತೀವ್ರ ಶೋಧ ನಡೆಸಲಾಗಿತ್ತು.
ಇದೀಗ ನಾಲ್ಕನೇ ಚಿರತೆ ಹಿಡಿದು ತಿರುಪತಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. ಬೋನಿನ ಸುತ್ತಮುತ್ತವೇ ಈ ಚಿರತೆ ಓಡಾಡುತ್ತಿದ್ದರೂ, ಬೋನಿನಲ್ಲಿ ಕಾಣಿಸುತ್ತಿದ್ದ ಉಳಿದ ಚಿರತೆಗಳನ್ನು ನೋಡಿ ಓಡಿಹೋಗುತ್ತಿತ್ತು. ಮನುಷ್ಯರ ಚಲನವಲನದ ವಾಸನೆ ಇರುವ ಕಾರಣ ಚಿರತೆ ಹಿಡಿಯಲು ಆಗುತ್ತಿರಲಿಲ್ಲ. ಆದರೆ ಪ್ರಾಣಿಗಳ ವಾಸನೆ ಬರುವ ಸ್ಪ್ರೇ ಮಾಡಿ ನಂತರ ಐದು ವರ್ಷ ಪ್ರಾಯದ ಚಿರತೆಯನ್ನು ಹಿಡಿಯಲಾಗಿದೆ.