FOLLOWUP | ಏಮ್ಸ್ ವೈದ್ಯರು ಜೀವ ಉಳಿಸಿದ್ದ ಮಗು ಆರೋಗ್ಯ ಸ್ಥಿತಿ ಚಿಂತಾಜನಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರಾ ಏರ್‌ಲೈನ್ಸ್ ವಿಮಾನದಲ್ಲಿ ಎರಡು ವರ್ಷದ ಮಗುವಿನ ಸ್ಥಿತಿ ಏಕಾಏಕಿ ಚಿಂತಾಜನಕವಾಗಿತ್ತು. ಅದೃಷ್ಟವಶಾತ್ ವಿಮಾನದಲ್ಲಿ ಐವರು ವೈದ್ಯರಿದ್ದು, ಮಗುವಿನ ಪ್ರಾಣ ಉಳಿಸಿದ್ದರು.

ನಾಗ್ಪುರದಲ್ಲಿ ವಿಮಾನ ಲ್ಯಾಂಡ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮಗುವಿನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಮಾನದಲ್ಲಿ ಮಗು ಏಕಾಏಕೆ ಮೂರ್ಛೆ ಹೋಗಿತ್ತು. ಎರಡು ವರ್ಷದ ಮಗುವಿಗೆ ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದರ ಜತೆಗೆ ಆಕೆಗೆ ಸೈನೋಸಿಸ್ ಎಂಬ ಸಮಸ್ಯೆಯೂ ಇತ್ತು. ವಿಮಾನದಲ್ಲಿ ವೈದ್ಯರು ಸಿಪಿಆರ್ ಮೂಲಕ ಮಗುವನ್ನು ಉಳಿಸಿದ್ದರು. ತಕ್ಷಣವೇ ನಾಗ್ಪುರದಲ್ಲಿ ಲ್ಯಾಂಡ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಗೆ ಬಂದಾಗ ಮಗುವಿನ ದೇಹ ತಣ್ಣಗಿದ್ದು, ನಾಡಿ ಇರಲಿಲ್ಲ ಇದಾದ ೪೫ ನಿಮಿಷದ ನಂತರ ಮಗು ಉಸಿರಾಡಿದೆ ಎಂದು ನಾಗ್ಪುರ ವೈದ್ಯರು ಹೇಳಿದ್ದರು. ಚಿಕಿತ್ಸೆ ಮುಂದುವರಿದಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!