ಭಾರತ ಮಾತೆಯ ಹತ್ಯೆ ಎಂದರೆ ಮೇಜನ್ನು ತಟ್ಟುತ್ತೀರಾ…: ವಿಪಕ್ಷಗಳ ವಿರುದ್ಧ ಸ್ಮೃತಿ ಇರಾನಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಲೋಕಸಭೆಯಲ್ಲಿ ಇಂದು ಅವಿಶ್ವಾಸ ನಿರ್ಣಯದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿದ್ದು, ರಾಹುಲ್ ಗಾಂಧಿ ಹೇಳಿಕೆಗಳಿಗೆ ತಿರುಗೇಟು ನೀಡಿದರು.

ಇಂದು ಸಂಸತ್​​ನಲ್ಲಿ ಮೊದಲ ಬಾರಿ ಒಬ್ಬ ಸಂಸದ ‘ಭಾರತ ಮಾತೆಯ ಸಾವಿನ ಬಗ್ಗೆ ಮಾತನಾಡಿದ್ದಾರೆ. ಅವರ ಮೈತ್ರಿಕೂಟದ ಸದಸ್ಯರು ಇದಕ್ಕೆ ಮೇಜನ್ನು ತಟ್ಟಿ ಬೆಂಬಲ ಸೂಚಿಸಿದ್ದಾರೆ . ಮಣಿಪುರದಲ್ಲಿ ತನ್ನ ತಾಯಿಯನ್ನು ಕೊಲ್ಲಲಾಗಿದೆ. ಎನ್‌ಡಿಎ ಸರ್ಕಾರ ಮಣಿಪುರವನ್ನು (Manipur) ಇಬ್ಭಾಗ ಮಾಡಿದೆ ಎಂದು ಹೇಳಿದ್ದಾರೆ. ಆದ್ರೆ ನೀವು ಭಾರತವಲ್ಲ, ಭಾರತ ಭ್ರಷ್ಟವಾಗಿಲ್ಲ. ಭಾರತವು ಅರ್ಹತೆಯನ್ನು ನಂಬುತ್ತದೆ ರಾಜವಂಶದಲ್ಲಿ ಅಲ್ಲ. ಇಂದು ಎಲ್ಲಾ ದಿನಗಳು ನಿಮ್ಮಂತಹವರು ಬ್ರಿಟಿಷರಿಗೆ ಹೇಳಿದ್ದನ್ನು ನೆನಪಿಟ್ಟುಕೊಳ್ಳಬೇಕು , ಭಾರತ ಬಿಟ್ಟು ತೊಲಗಿ, ಭ್ರಷ್ಟಾಚಾರ ಭಾರತ ಬಿಟ್ಟು ತೊಲಗಲಿ, ವಂಶಾಡಳಿತ ಭಾರತ ಬಿಟ್ಟು ತೊಲಗಲಿ. ಮೆರಿಟ್ ಈಗ ಭಾರತದಲ್ಲಿ ಸ್ಥಾನ ಪಡೆಯುತ್ತದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಮಣಿಪುರ ಇಬ್ಭಾಗವಾಗಿಲ್ಲ, ಅದು ಈ ದೇಶದ ಭಾಗ. ವಿರೋಧ ಪಕ್ಷಗಳ ಮೈತ್ರಿಕೂಟದ ಸದಸ್ಯರೊಬ್ಬರು ತಮಿಳುನಾಡಿನಲ್ಲಿ ಭಾರತ ಎಂದರೆ ಉತ್ತರ ಭಾರತ ಎಂದು ಹೇಳಿದ್ದಾರೆ. ಧೈರ್ಯವಿದ್ದರೆ ರಾಹುಲ್ ಗಾಂಧಿ ಈ ಬಗ್ಗೆ ಪ್ರತಿಕ್ರಿಯಿಸಲಿ. ಮತ್ತೊಬ್ಬ ಕಾಂಗ್ರೆಸ್ ನಾಯಕ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕತ್ವದ ಆದೇಶದಂತೆ ಈ ಹೇಳಿಕೆ ನೀಡಲಾಗಿದೆಯೇ?’ ಎಂದು ಅವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಜೋಡೋ ಯಾತ್ರೆ ಕುರಿತು ಮಾತನಾಡಿದ ಅವರು, ತಾನು ಕೈಗೊಂಡಿದ್ದ ಯಾತ್ರೆ ಬಗ್ಗೆ ರಾಹುಲ್ ಸದನದಲ್ಲಿ ಹೇಳಿದ್ದಾರೆ. ಯಾತ್ರೆ ವೇಳೆ 370 ನೇ ವಿಧಿಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ದೇಶದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸುವುದಿಲ್ಲ ಅಥವಾ ಕಾಶ್ಮೀರಿ ಪಂಡಿತರನ್ನು “ರಲಿಬ್ ಗಾಲಿಬ್ ಚಾಲಿಬ್ (ಮತಾಂತರ ಮಾಡಿ, ಸಾಯಿರಿ ಅಥವಾ ಬಿಟ್ಟುಬಿಡಿ)” ಎಂದು ಬೆದರಿಕೆ ಹಾಕುವವರನ್ನು ಉಳಿಸುವುದಿಲ್ಲ” ಎಂದು ಸದನದಿಂದ ಓಡಿ ಹೋದ ಆ ವ್ಯಕ್ತಿಯಲ್ಲಿ ನಾನು ಹೇಳುತ್ತಿದ್ದೇನೆ ಎಂದರು.

ಕಣಿವೆ ರಾಜ್ಯ ರಕ್ತದಿಂದ ತೊಯ್ದಿರುವುದನ್ನು ದೇಶ ಕಂಡಿದೆ, ಅವರು(ಕಾಂಗ್ರೆಸ್ ನಾಯಕರು) ಅಲ್ಲಿಗೆ ಹೋದಾಗಲ್ಲೆಲ್ಲ ಹಿಮದ ಚೆಂಡುಗಳೊಂದಿಗೆ ಆಟವಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು 370 ನೇ ವಿಧಿಯಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದ ಬಳಿಕ ಇದು ಸಾಧ್ಯವಾಗಿದೆಎಂದು ಹೇಳಿದರು.

ತಮ್ಮ ಮಾತಿನಲ್ಲ 1984 ರ ಗಲಭೆಗಳು, ತುರ್ತು ಪರಿಸ್ಥಿತಿ ಮತ್ತು ಗಿರಿಜಾ ಟಿಕೂ ಅವರ ಹತ್ಯೆಯನ್ನು ಉಲ್ಲೇಖಿಸಿದ ಸ್ಮೃತಿ ಇರಾನಿ, ಇದು ರಕ್ತದಲ್ಲಿ ನೆನೆದ ಕಾಂಗ್ರೆಸ್ ಇತಿಹಾಸ ಖಡಕ್ ಆಗಿ ಉತ್ತರ ನೀಡಿದರು. ಗಿರಿಜಾ ಟಿಕೂ ಎಂಬ ಕಾಶ್ಮೀರಿ ಪಂಡಿತರನ್ನು ಕಾಶ್ಮೀರದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದನ್ನು ಸಿನಿಮಾದಲ್ಲಿ ತೋರಿಸಿದಾಗ ಕಾಂಗ್ರೆಸ್ಸಿನ ಕೆಲ ಮುಖಂಡರು ಅಪಪ್ರಚಾರ ಎಂದರು. ಅದೇ ಪಕ್ಷದ ನಾಯಕರು ಇಂದು ಮಣಿಪುರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಮಣಿಪುರದ ಬಗ್ಗೆ ಚರ್ಚೆಯಿಂದ ಕೇಂದ್ರ ಸರ್ಕಾರವು ಓಡಿಹೋಗಿಲ್ಲ, ಆದರೆ ಪ್ರತಿಪಕ್ಷಗಳು ಓಡಿಹೋದವು ಎಂದು ಅವರು ಹೇಳಿದ್ದಾರೆ.ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಣಿಪುರ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಪದೇ ಪದೇ ಹೇಳಿದರು, ಪ್ರತಿಪಕ್ಷಗಳು ಅದರಿಂದ ಓಡಿಹೋದವು. ನಾವು ಈ ರೀತಿ ಮಾಡಲಿಲ್ಲ ಎಂದು ವಿಪಕ್ಷಗಳಿಗೆ ಮಾತಿನ ಚಾಟಿ ಬೀಸಿದರು .

ರಾಹುಲ್ ಗಾಂಧಿಯವರ ವಿದೇಶಿ ಭೇಟಿಗಳ ಬಗ್ಗೆ ಮಾತನಾಡಿದ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಅವರು ದೇಶದಾದ್ಯಂತ ಸೀಮೆಎಣ್ಣೆ ಸುರಿದಿದ್ದಾರೆ ಎಂದು ಹೇಳಿದರು. ರಾಹುಲ್ ಗಾಂಧಿಯವರೇ, ಬೆಂಕಿಪೆಟ್ಟಿಗೆಯನ್ನು ಹುಡುಕಲು ನೀವು ಎಲ್ಲಿಗೆ ಹೋಗಿದ್ದೀರಿ? ನೀವು ಅಮೇರಿಕಾಕ್ಕೆ ಹೋಗಲಿಲ್ಲವೇ? ಅದಾನಿಗೆ ಕಾಂಗ್ರೆಸ್ ಏಕೆ ಯೋಜನೆಗಳನ್ನು ನೀಡಿದೆ ಎಂದು ಕೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!