ಅಫಜಲಪುರದಲ್ಲಿ ರಾರಾಜಿಸುತ್ತಿದೆ ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಕಟೌಟ್!

ಹೊಸದಿಗಂತ ವರದಿ ಕಲಬುರಗಿ:

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಕಟೌಟ್ ಮತ್ತು ಬ್ಯಾನರ್,ಗಳು ಜಿಲ್ಲೆಯ ಅಫಜಲಪುರ ತಾಲೂಕಿನಾದ್ಯಂತ ರಾರಾಜಿಸುತ್ತಿವೆ.

ನಾಳೆ 24ರಂದು ಅಫಜಲಪುರ ತಾಲೂಕಿನ ದೇವಲ್ ಗಾಣಗಾಪುರ್ ನಲ್ಲಿ ನಡೆಯಲಿರುವ ದಿವಂಗತ ವಿಠ್ಠಲ ಹೇರೂರ್ ಕಂಚಿನ ಪ್ರತಿಮೆ ಆನಾವರಣ ಕಾಯ೯ಕ್ರಮ ನಡೆಯಲಿದ್ದು,ಈ ಹಿನ್ನೆಲೆಯಲ್ಲಿ ಸ್ವಾಗತ ಕೋರುವ ಕಟೌಟ್ ಮತ್ತು ಬ್ಯಾನರ್ ತಾಲೂಕಿನಾದ್ಯಂತ ರಾರಾಜಿಸುತ್ತಿವೆ.

ದಿವಂಗತ ವಿಠ್ಠಲ ಹೇರೂರ್ ಅವರ ಕಂಚಿನ ಪ್ರತಿಮೆ ಅನಾವರಣಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದು,ಇದರ ನಡುವೆಯೇ ಸ್ವಾಗತ ಕೋರಲು ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ಆರ್.ಡಿ.ಪಾಟೀಲ್ ಕಟೌಟ್ ಮತ್ತು ಬ್ಯಾನರ್ ಅಫಜಲಪುರ ತುಂಬೆಲ್ಲ ರಾರಾಜಿಸುತ್ತಿವೆ.

ಕಳೆದ ತಿಂಗಳು ಜೈವಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಆರ್.ಡಿ.ಪಾಟೀಲ್ ಮತ್ತು ಸಹೋದರ ಮಹಾಂತೇಶ ಪಾಟೀಲ್. ಮೊನ್ನೆಯಷ್ಟೇ ಸಿಐಡಿ ಅಧಿಕಾರಿಗಳನ್ನು ತಳ್ಳಿ ಓಡಿ ಆರ್.ಡಿ.ಪಾಟೀಲ್ ಪರಾರಿಯಾಗಿದ್ದನು.ಇದೀಗ ಅಫಜಲಪುರ ತಾಲೂಕಿನ ವ್ಯಾಪ್ತಿಯಲ್ಲಿ ಅಣ್ಣ ತಮ್ಮಂದಿರ ಪೋಟೋಗಳು, ಕಟೌಟ್ ಮತ್ತು ಬ್ಯಾನರ್ ಗಳು ರಾರಾಜಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!