ಕೋವಿಡ್ ಉಚ್ಛಾಟನೆಗೆ ರಾಜ್ಯ ಸಜ್ಜು: ಗುಣಮುಖರಾಗಲು ಇನ್ನು ಇಷ್ಟೇ ಮಂದಿ ಬಾಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರೀಕ್ಷೆಯಂತೆ ರಾಜ್ಯದಲ್ಲಿ ಕೋವಿಡ್ ಅಬ್ಬರ ಮತ್ತಷ್ಟು ಕಡಿಮೆಯಾಗಿದೆ.
ಕಳೆದ 24 ಗಂಟೆಯಲ್ಲಿ ವರದಿಯಾಗಿರುವುದು ಕೇವಲ 34 ಹೊಸ ಪಾಸಿಟಿವ್ ಪ್ರಕರಣಗಳು. ಮತ್ತೊಂದು ಸಂತಸದ ವಿಚಾರ ಎಂದರೆ ಶನಿವಾರ ಕೋವಿಡ್ ಸಂಬಂಧಿ ಯಾವುದೇ ಸಾವು ಸಂಭವಿಸಿಲ್ಲ.
ರಾಜ್ಯದಲ್ಲಿ ಇಂದು ಒಂದೇ ದಿನ 79 ಸೋಂಕಿತರು ಗುಣಮುಖರಾಗಿದ್ದಾರೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 39,03,998. ರಾಜ್ಯದಲ್ಲಿ ಇನ್ನು ಉಳಿದಿರುವುದು ಕೇವಲ 1,516 ಸಕ್ರಿಯ ಪ್ರಕರಣಗಳು.
ಬೆಂಗಳೂರಿನಲ್ಲಿ ಶನಿವಾರ 31 ಮಂದಿಗೆ ಕೋವಿಡ್ ಬಾಧಿಸಿದೆ. ರಾಜ್ಯದಲ್ಲಿನ ಸೋಂಕಿತರ ಸಂಖ್ಯೆ 39,45,610.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!